News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ಮತ್ತೊಮ್ಮೆ ಧನ್ಯವಾದ ಅರ್ಪಿಸಿದ ಟರ್ಕಿ ರಾಯಭಾರಿ

ನವದೆಹಲಿ: ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಇಂದು ಭಾರತಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಭೂಕಂಪ ಪೀಡಿತ ತಮ್ಮ ರಾಷ್ಟ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿನಾಶಕಾರಿ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಸತ್ತವರ ಸಂಖ್ಯೆ 33,000 ಕ್ಕೆ ತಲುಪಿದೆ.

ಟ್ವೀಟ್ ಮಾಡಿರುವ ಸುನೇಲ್, “ಭಾರತದ ಜನರಿಂದ ತುರ್ತು‌ ರೀತಿಯ ದೇಣಿಗೆಗಳ ಮತ್ತೊಂದು ಬ್ಯಾಚ್ ಟರ್ಕಿ ತಲುಪುವ ಹಾದಿಯಲ್ಲಿದೆ. ಟರ್ಕಿಶ್‌ ಏರ್‌ಲೈನ್‌, ಭಾರೀತ ವಿಮಾನಯಾನ ಪ್ರತಿದಿನವೂ ಭೂಕಂಪ ಪೀಡಿತ ಪ್ರದೇಶಕ್ಕೆ ಉಚಿತವಾಗಿ ಸಹಾಯವನ್ನು ಒಯ್ಯುತ್ತಿದೆ. #ವಸುಧೈವ ಕುಟುಂಬಕಂ” ಎಂದಿದ್ದಾರೆ.

ಅಲ್ಲದೇ, “ಧನ್ಯವಾದ ಭಾರತ! ಪ್ರತಿ ಟೆಂಟ್, ಪ್ರತಿ ಹೊದಿಕೆ ಅಥವಾ ಸ್ಲೀಪಿಂಗ್‌ ಬ್ಯಾಗ್ ನೂರಾರು ಸಾವಿರ ಭೂಕಂಪದಿಂದ ಬದುಕುಳಿದವರಿಗೆ ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದೆ” ಎಂದಿದ್ದಾರೆ

ಏಳನೇ ‘ಆಪರೇಷನ್ ದೋಸ್ತ್’ ವಿಮಾನವು 23 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳೊಂದಿಗೆ ಭೂಕಂಪ ಪೀಡಿತ ಸಿರಿಯಾವನ್ನು ಭಾನುವಾರ ತಲುಪಿತು, ಇದನ್ನು ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಆಡಳಿತ ಮತ್ತು ಪರಿಸರದ ಉಪ ಸಚಿವ ಮೌತಾಜ್ ​​ಡೌಜಿ ಸ್ವೀಕರಿಸಿದರು.

‘ಆಪರೇಷನ್ ದೋಸ್ತ್’ ಭಾರತ ಮತ್ತು ಟರ್ಕಿ ನಡುವಿನ ಸ್ನೇಹವನ್ನು ಸಂಕೇತಿಸುತ್ತದೆ ಎಂದು ಸುನೇಲ್ ಕಳೆದ ವಾರ ಹೇಳಿದ್ದರು.

ಗಾಜಿಯಾಬಾದ್‌ನ ಹಿಂಡನ್ ಏರ್ ಬೇಸ್‌ನಲ್ಲಿ ಮಾತನಾಡಿದ ಅವರು,  “ಆಪರೇಷನ್ ದೋಸ್ತ್ ಒಂದು ಸಾಂಕೇತಿಕ ಕಾರ್ಯಾಚರಣೆಯಾಗಿದೆ. ಇದು ಈಗಾಗಲೇ ನಾವು ಸ್ನೇಹಿತರಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ. ನಾವು ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top