News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಟಿಪ್ಪು ಆರಾಧಕ ಕಾಂಗ್ರೆಸ್-ಜೆಡಿಎಸ್‌ ಬೇಡ, ರಾಣಿ ಅಬ್ಬಕ್ಕಳನ್ನು ಗೌರವಿಸುವ ಬಿಜೆಪಿ ಬೆಂಬಲಿಸಿ: ಅಮಿತ್‌ ಶಾ

ಪುತ್ತೂರು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರು ಇಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇಂದು ನಾನು ಮಂಗಳೂರಿನ ಪುತ್ತೂರಿಗೆ ಆಗಮಿಸಿದ್ದೇನೆ, ಇದು ಅತ್ಯಂತ ಪವಿತ್ರ ಭೂಮಿ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾದ ನಾಡು. ಪರಶುರಾಮನ ಸೃಷ್ಟಿ ಎಂದೂ ಕರೆಯಲ್ಪಡುತ್ತದೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾ ನೋಡಿದೆ, ಆಗ ತಿಳಿಯಿತು ಇದು ಎಷ್ಟು ಸಮೃದ್ಧವಾದ ಪರಂಪರೆಯನ್ನು ಹೊಂದಿರುವ ಭೂಮಿ ಎಂದು. ರೈಲ್ವೆ, ವಿಮಾನನಿಲ್ದಾಣ, ಬಂದರು, ರಸ್ತೆ ಮಾರ್ಗದ ಮೂಲಕ ವ್ಯಾಪಾರ ನಡೆಸುವ ಕರ್ನಾಟಕದ ಏಕೈಕ ನಗರ ಮಂಗಳೂರು. ಈ ನಾಡಿಗೆ ನನ್ನ ನಮನಗಳು” ಎಂದಿದ್ದಾರೆ.

“ಕ್ಯಾಂಪ್ಕೋ ನಡೆದು ಬಂದ ಹಾದಿ, ಇದರ ಪ್ರಗತಿ ನೋಡಿ ನಾನು ಈ ಬಹುರಾಜ್ಯ ಸಹಕಾರ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಲು ನಿರ್ಧರಿಸಿದೆ. ಇಂದು ಪಂಡಿತ್‌ ದೀನ್‌ ದಯಾಳ್‌ ಅವರ ಪುಣ್ಯತಿಥಿಯೂ ಆಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬಿಜೆಪಿ ಇಂದು ನಡೆಯುತ್ತಿದೆ” ಎಂದಿದ್ದಾರೆ.

“ಬಿಜೆಪಿ ಬಡವರಿಗೆ ಮನೆ ನೀಡುತ್ತಿದೆ, ಮನೆಯೊಳಗೆ ವಿದ್ಯುತ್‌, ನೀರು, ಗ್ಯಾಸ್‌ ಸಿಲಿಂಡರ್‌, ಶೌಚಾಲಯದ ಸೌಲಭ್ಯಗಳನ್ನೂ ಕಲ್ಪಿಸಿಕೊಡುತ್ತಿದೆ. ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ನೀಡುತ್ತಿದೆ. ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳ ಆರ್ಥಿಕ ನೆರವು ಒದಗಿಸುತ್ತಿದೆ. ಇದೆಲ್ಲವೂ ದೀನದಯಾಳ್‌ ಅವರ ಅಂತ್ಯೋದಯ ಸಿದ್ಧಾಂತದ ಅನುರೂಪವಾಗಿದೆ. ದೇಶದಲ್ಲಿನ ಬಿಜೆಪಿ ಸರ್ಕಾರಗಳು ರಾಷ್ಟ್ರೀಯ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಗೆ ಬದ್ಧವಾಗಿದೆ” ಎಂದಿದ್ದಾರೆ.

“ಕಾಂಗ್ರೆಸ್‌ ಮತ್ತು ಜೆಡಿಎಸ್‌ ಟಿಪ್ಪು ಆರಾಧಕ ಪಕ್ಷಗಳು, ನೀವು ರಾಣಿ ಅಬ್ಬಕ್ಕಳನ್ನು ಆರಾಧಿಸುವ ಬಿಜೆಪಿ ಪಕ್ಷಕ್ಕೆ ಮತ ನೀಡಿ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಪಡೆ ದೇಶದ ರಕ್ಷಣೆ, ಸಮೃದ್ಧಿಗೆ ಸಂಕಲ್ಪ ತೊಟ್ಟಿದೆ” ಎಂದಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top