News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ಸಂಕಷ್ಟದಲ್ಲಿರುವ ಅಫ್ಘಾನ್‌ ಜನತೆಯ ಕೈಬಿಡುವುದಿಲ್ಲ: ದೋವಲ್‌

ನವದೆಹಲಿ: ಅಫ್ಘನ್ನರ ಯೋಗಕ್ಷೇಮ ಮತ್ತು ಮಾನವೀಯ ಅಗತ್ಯಗಳನ್ನು ಒತ್ತಿ ಹೇಳಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, ಸಂಕಷ್ಟದ ಸಮಯದಲ್ಲಿ ಭಾರತ ಅಫ್ಘಾನ್‌ ಜನತೆಯ ಕೈಬಿಡುವುದಿಲ್ಲ ಎಂದಿದ್ದಾರೆ

ರಷ್ಯಾದ ಮಾಸ್ಕೋದಲ್ಲಿ ಭದ್ರತಾ ಮಂಡಳಿಗಳ ಕಾರ್ಯದರ್ಶಿಗಳು ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​5ನೇ ಬಹುಪಕ್ಷೀಯ ಸಭೆಯಲ್ಲಿ ಭಾಗವಹಿಸಿದ  ದೋವಲ್, ಭಾರತವು ಆಫ್ಘನ್ ಜನರನ್ನು ಅವರ ಅಗತ್ಯವಿರುವ ಸಮಯದಲ್ಲಿ ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು.

ಅಫ್ಘಾನಿಸ್ತಾನವು ಪ್ರಸ್ತುತ ಕಠಿಣ ಹಂತದ ಮೂಲಕ ಹಾದುಹೋಗುತ್ತಿದೆ. ಭಾರತವು ಅಫ್ಘಾನಿಸ್ತಾನದೊಂದಿಗೆ ಐತಿಹಾಸಿಕ ಮತ್ತು ವಿಶೇಷ ಸಂಬಂಧವನ್ನು ಹೊಂದಿದೆ ಮತ್ತು ಅಫ್ಘಾನಿಸ್ತಾನದ ಜನರ ಯೋಗಕ್ಷೇಮ ಮತ್ತು ಮಾನವೀಯ ಅಗತ್ಯಗಳು ಭಾರತದ ಅಗ್ರಗಣ್ಯ ಆದ್ಯತೆಯಾಗಿದೆ ಎಂದು ಹೇಳಿದರು.

ಆಹಾರ ಸುರಕ್ಷತೆ ಮತ್ತು ವೈದ್ಯಕೀಯ ಸರಬರಾಜುಗಳ ಮೇಲೆ ಕೇಂದ್ರೀಕರಿಸಿ ಭಾರತವು ಇಲ್ಲಿಯವರೆಗೆ 40 ಸಾವಿರ ಮೆಟ್ರಿಕ್ ಟನ್ ಗೋಧಿ, 60 ಟನ್ ಔಷಧಿಗಳು, ಐದು ಲಕ್ಷ ಕೋವಿಡ್ ಲಸಿಕೆಗಳು, ಚಳಿಗಾಲದ ಬಟ್ಟೆ ಮತ್ತು 28 ಟನ್ ವಿಪತ್ತು ಪರಿಹಾರವನ್ನು ಅಫ್ಘಾನಿಸ್ಥಾನಕ್ಕೆ ನೀಡಿದೆ ಎಂದು ದೋವಲ್‌ ಹೇಳಿದ್ದಾರೆ.

ರಷ್ಯಾ, ಭಾರತ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಚೀನಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸಭೆಯಲ್ಲಿ ಭಾಗವಹಿಸಿವೆ. ಅಫ್ಘಾನಿಸ್ತಾನ ಎದುರಿಸುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಮಾನವೀಯ ಸವಾಲುಗಳು ಸೇರಿದಂತೆ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಇಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top