ನವದೆಹಲಿ: ಅತಿ ಭೀಕರ ಭೂಕಂಪಕ್ಕೆ ತತ್ತರಿಸಿ ಹೋಗಿರುವ ಟರ್ಕಿಗೆ ಭಾರತವು ನೆರವಿನ ಹಸ್ತವನ್ನು ಚಾಚಿದೆ. ಈಗಾಗಲೇ ಆ ದೇಶಕ್ಕೆ ವೈದ್ಯಕೀಯ ತಂಡ ಮತ್ತು ಇತರ ಅಗತ್ಯ ಭೂಕಂಪ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಬ್ಯಾಚ್ನ ರವಾನೆಯನ್ನು ಕಳುಹಿಸಿಕೊಟ್ಟಿದೆ.
24 ಗಂಟೆಗಳ ಅವಧಿಯಲ್ಲಿ ಟರ್ಕಿ ಮೂರು ಭೂಕಂಪಗಳನ್ನು ಅನುಭವಿಸಿದೆ. ಇದರಲ್ಲಿ ಸತ್ತವರ ಸಂಖ್ಯೆ ಇದುವರೆಗಿನ ಲೆಕ್ಕಚಾರದ ಪ್ರಕಾರ 4,300ಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಇಂತಹ ಕಠೋರ ಸಮಯದಲ್ಲಿ ಟರ್ಕಿಗೆ ನೆರವು ನೀಡಿರುವ ಭಾರತಕ್ಕೆ ಟರ್ಕಿ ರಾಯಭಾರಿ ಫಿರಾತ್ ಸುನೇಲ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಗತ್ಯಕ್ಕಾಗುವ ಸ್ನೇಹಿತನೇ ನಿಜವಾದ ಸ್ನೇಹಿತ ಎಂದು ಬಣ್ಣಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಟರ್ಕಿಷ್ ಮತ್ತು ಹಿಂದಿಯಲ್ಲಿ ದೋಸ್ತ್ ಎಂಬುದು ಸಾಮಾನ್ಯ ಪದ. ಟರ್ಕಿಷ್ ನಲ್ಲಿ ಒಂದು ಗಾದೆ ಇದೆ: ಅಗತ್ಯಕ್ಕಾಗುವ ಸ್ನೇಹಿತನೇ ನಿಜವಾದ ಸ್ನೇಹಿತ ಎಂಬುದು. ಅನಂತ ಧನ್ಯವಾದಗಳು ಭಾರತ” ಎಂದಿದ್ದಾರೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ ಮುರಳಿಧರಂ ಅವರು ಟರ್ಕಿ ರಾಯಭಾರ ಕಚೇರಿಗೆ ಭೇಟಿ ನೀಡಿ ತಮ್ಮ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ಸಂತಾಪ ಮತ್ತು ಮಾನವೀಯ ನೆರವನ್ನು ತಿಳಿಸಿದ್ದಾರೆ.
"Dost" is a common word in Turkish and Hindi… We have a Turkish proverb: "Dost kara günde belli olur" (a friend in need is a friend indeed).
Thank you very much 🇮🇳@narendramodi @PMOIndia @DrSJaishankar @MEAIndia @MOS_MEA #earthquaketurkey https://t.co/nB97RubRJU— Fırat Sunel फिरात सुनेल فرات صونال (@firatsunel) February 6, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.