News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2027ರ ವೇಳೆಗೆ ಭಾರತವು ಕುಷ್ಟರೋಗ ಮುಕ್ತವಾಗಲಿದೆ: ಮಾಂಡವೀಯಾ

ನವದೆಹಲಿ: 2027ರ ವೇಳೆ ಭಾರತವು ಕುಷ್ಟರೋಗ ಮುಕ್ತವಾಗಲಿದೆ. ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸುತ್ತಿದೆ ಮತ್ತು ಹೊಸ ಕುಷ್ಠರೋಗ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ನವದೆಹಲಿಯಲ್ಲಿ ರಾಷ್ಟ್ರೀಯ ಕುಷ್ಠರೋಗ ವಿರೋಧಿ ದಿನದ ಕಾರ್ಯಕ್ರಮದಲ್ಲಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಸಚಿವರು, ಸುಸ್ಥಿರ ಅಭಿವೃದ್ಧಿ ಗುರಿಯ ಗುರಿಗಿಂತ ಮೂರು ವರ್ಷ ಮುಂಚಿತವಾಗಿ, ಸಮಾಜದ ಬೆಂಬಲದೊಂದಿಗೆ 2027 ರ ವೇಳೆಗೆ ಭಾರತವು ಕುಷ್ಠರೋಗ ಮುಕ್ತ ಭಾರತ ಗುರಿಯನ್ನು ಸಾಧಿಸಲಿದೆ ಎಂದು ಹೇಳಿದರು.

ಕುಷ್ಠರೋಗದಿಂದ ಬಾಧಿತರಾದ ಜನರ ಬಗ್ಗೆ ಮಹಾತ್ಮ ಗಾಂಧೀಜಿಯವರು ನಿರಂತರ ಕಾಳಜಿಯನ್ನು ಹೊಂದಿದ್ದರು, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಈ ದೇಶದಿಂದ ಕುಷ್ಠರೋಗವನ್ನು ತೊಡೆದುಹಾಕುವ ಪ್ರಯತ್ನಗಳು ಗಾಂಧೀಜಿಯವರ ದೂರದೃಷ್ಟಿಗೆ ಒಂದು ದೊಡ್ಡ ಗೌರವವಾಗಿದೆ. 2005 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 10,000 ಜನಸಂಖ್ಯೆಗೆ 1 ಪ್ರಕರಣವನ್ನು ಸಾಧಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಡಾ ಭಾರತಿ ಪ್ರವೀಣ್ ಪವಾರ್, ವಿಶ್ವಾದ್ಯಂತ ಕುಷ್ಠರೋಗದ ಒಟ್ಟು ಪ್ರಕರಣಗಳಲ್ಲಿ ಭಾರತದಲ್ಲಿ ಸುಮಾರು 52 ಪ್ರತಿಶತದಷ್ಟು ಜನರು ಇರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು.

2014-15ರಲ್ಲಿ 10,000 ಜನಸಂಖ್ಯೆಗೆ ಶೇ.0.69 ಇದ್ದ ಕುಷ್ಠರೋಗ ಪ್ರಕರಣಗಳ ಪ್ರಮಾಣ 2021-22ರಲ್ಲಿ 0.45ಕ್ಕೆ ಇಳಿದಿದೆ. ಆದರೂ, ಈ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸತತ ಪ್ರಯತ್ನವು ಇಂದಿನ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

2015 ರಿಂದ, ರಾಷ್ಟ್ರೀಯ ಕುಷ್ಠರೋಗ ವಿರೋಧಿ ಅಡಿಯಲ್ಲಿ ನಿರಂತರ ಪ್ರಯತ್ನದಿಂದ, ಭಾರತವು ಕುಷ್ಠರೋಗದಿಂದ ಉಂಟಾಗುವ ಅನೇಕ ಅಂಗವೈಕಲ್ಯಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top