News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಸ್ಟ್ರೇಲಿಯಾದಲ್ಲಿ ದೇಗುಲಗಳ ಮೇಲಿನ ದಾಳಿ ಕಳವಳಕಾರಿ: ಭಾರತ

ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾದ ಮೂರು ಹಿಂದೂ ದೇವಾಲಯಗಳನ್ನು ವಿರೂಪಗೊಳಿಸಿರುವುದನ್ನು ಭಾರತ ತೀವ್ರವವಾಗಿ ಖಂಡಿಸಿದೆ.

ಆಸ್ಟ್ರೇಲಿಯಾದಲ್ಲಿ ಭಾರತ ವಿರೋಧಿ ಭಯೋತ್ಪಾದಕರ ವೈಭವೀಕರಣವನ್ನು ಒಳಗೊಂಡ ಗೋಡೆ ಬರಹವನ್ನು ದೇಗುಲಗಳ ಮೇಲೆ ಬರೆದಿರುವುದನ್ನು ಬಲವಾಗಿ ಖಂಡಿಸುವುದಾಗಿ ಕ್ಯಾನ್‌ಬೆರಾದಲ್ಲಿನ ಭಾರತೀಯ ಹೈಕಮಿಷನ್ ಹೇಳಿದೆ.

ಈ ತಿಂಗಳ ಆರಂಭದಲ್ಲಿ, ಮೂರು ಹಿಂದೂ ದೇವಾಲಯಗಳು – ಮೆಲ್ಬೋರ್ನ್‌ನಲ್ಲಿರುವ BAPS ಸ್ವಾಮಿನಾರಾಯಣ ದೇವಸ್ಥಾನ, ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಾಲಯ ಮತ್ತು ಮೆಲ್ಬೋರ್ನ್‌ನಲ್ಲಿರುವ ಇಸ್ಕಾನ್ ದೇವಾಲಯದ ಗೋಡೆಗಳಲ್ಲಿ  ಖಲಿಸ್ತಾನ್ ಬೆಂಬಲಿಗರು ಭಾರತ ವಿರೋಧಿ ಘೋಷಣೆ ಬರೆದು ವಿರೂಪಗೊಳಿಸಿದ್ದರು.

“ಭಾರತ ವಿರೋಧಿ ಭಯೋತ್ಪಾದಕರ ವೈಭವೀಕರಣವನ್ನು ಒಳಗೊಂಡಿರುವ ಗೋಡೆ ಬರಹದಂತ ವಿಧ್ವಂಸಕತೆಯ ಹೆಚ್ಚಳ ಮತ್ತು ದುಷ್ಕರ್ಮಿಗಳ ನಿರ್ಭಯತೆ ಆತಂಕಕಾರಿಯಾಗಿದೆ” ಎಂದು ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

“ಈ ಘಟನೆಗಳು ಶಾಂತಿಯುತ ಬಹು-ನಂಬಿಕೆ ಮತ್ತು ಬಹು-ಸಾಂಸ್ಕೃತಿಕ ಭಾರತೀಯ-ಆಸ್ಟ್ರೇಲಿಯನ್ ಸಮುದಾಯದ ನಡುವೆ ದ್ವೇಷ ಮತ್ತು ವಿಭಜನೆಯನ್ನು ಬಿತ್ತುವ ಸ್ಪಷ್ಟ ಪ್ರಯತ್ನಗಳಾಗಿವೆ” ಎಂದು ಅದು ಹೇಳಿದೆ.

“ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಪರ ಅಂಶಗಳ ಚಟುವಟಿಕೆಗಳು ಹೆಚ್ಚಿಸುತ್ತಿವೆ, ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಮತ್ತು ಆಸ್ಟ್ರೇಲಿಯಾದ ಹೊರಗಿನ ಇತರ ಶತ್ರು ಸಂಸ್ಥೆಗಳಿಂದ ಸಕ್ರಿಯವಾಗಿ ಸಹಾಯ ಮತ್ತು ಪ್ರೋತ್ಸಾಹಇವುಗಳಿಗೆ ಸಿಗುತ್ತಿದೆ” ಎಂದು ಹೈ ಕಮಿಷನ್  ಹೇಳಿದೆ.

ಭಾರತದ ಕಳವಳಗಳನ್ನು ಆಸ್ಟ್ರೇಲಿಯನ್ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಆಸ್ಟ್ರೇಲಿಯದಲ್ಲಿರುವ ಹೈಕಮಿಷನ್ ಮತ್ತು ನಮ್ಮ ಕಾನ್ಸುಲೇಟ್‌ಗಳು ಮತ್ತು ದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನ್‌ನೊಂದಿಗೆ ನಮ್ಮ ಸರ್ಕಾರ ಈ ಬಗ್ಗೆ ವಿಷಯ ಪ್ರಸ್ತಾಪಿಸಿದೆ” ಎಂದು ಅದು ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top