ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ತುಳುನಾಡಿನ ಜನತೆ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಜನತೆ ರಕ್ತ ಹರಿಸಲೂ ಸಿದ್ಧವಿರುವುದಾಗಿ ಘೋಷಿಸಿದ್ದಾರೆ.
ನೇತ್ರಾವತಿ ಪ್ರಕೃತಿಯ ಕೊಡುಗೆ, ಇದರ ನೀರನ್ನು ಬಳಸುವ ಹಕ್ಕು ಪ್ರತಿಯೊಬ್ಬನಿಗೂ ಇದೆ. ಆದರೆ ಪ್ರಕೃತಿಗೆ ವಿರುದ್ಧವಾಗಿ ಅದನ್ನು ತಿರುಗಿಸಿ ಬೇರೆಡೆಗೆ ನೀರು ಕೊಂಡೊಯ್ಯುವುದು ಒಳ್ಳೆಯದಲ್ಲ, ಇದರಿಂದ ಜೀವನದಿ ನೇತ್ರಾವತಿ ಬತ್ತಿ ಹೋಗುತ್ತಾಳೆ ಎಂಬುದನ್ನು ಇಲ್ಲಿನ ಜನತೆ ಏರು ಧ್ವನಿಯಲ್ಲಿ ರಾಜಕಾರಣಿಗಳ ಮನಮುಟ್ಟುವಂತೆ ವಿವರಿಸಿದ್ದಾರೆ.
ನಿನ್ನೆ ನಡೆದ ಹೆದ್ದಾರಿ ಬಂದ್, ಪ್ರತಿಭಟನೆಯಲ್ಲಿ ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು, ತುಳು ಚಲನಚಿತ್ರ ಕಲಾವಿದರು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೂ ಬಂದ್ ಮುಂದುವರೆಯಿತು. ವಿವಿಧ ಸಂಘಟನೆಗಳ ಸದಸರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.
ನದಿಯನ್ನು ಬತ್ತಿಸಿ ದಕ್ಷಿಣಕನ್ನಡವನ್ನು ಬರಡು ಭೂಮಿಯನ್ನಾಗಿಸಲು ನಾವು ಯಾರಿಗೂ ಅವಕಾಶ ಕೊಡಲಾರೆವು ಎಂದು ಪ್ರತಿಭಟನಾನಿರತರು ಸ್ಪಷ್ಟಪಡಿಸಿದ್ದಾರೆ. ಜನರ ಈ ಕೂಗನ್ನು ಸರ್ಕಾರಗಳು ಆಲಿಸಬೇಕು, ಇಲ್ಲವಾದರೆ ದಕ್ಷಿಣಕನ್ನಡ ಜನತೆಯ ತೀವ್ರ ವಿರೋಧವನ್ನು ಅದು ಎದುರಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.