News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ನಿರಂತರ ನೆರವಿಗೆ ಧನ್ಯವಾದ ಅರ್ಪಿಸಿದ ಶ್ರೀಲಂಕಾ

ಕೊಲಂಬೊ: ಕಳೆದ ವರ್ಷ USD 3.9 ಶತಕೋಟಿ ಸಾಲದ ಉದಾರ ಬೆಂಬಲ ನೀಡಿದ ಭಾರತಕ್ಕೆ ಶ್ರೀಲಂಕಾ ಧನ್ಯವಾದ ಅರ್ಪಣೆ ಮಾಡಿದೆ.

ಎರಡು ದಿನಗಳ ಭೇಟಿಗಾಗಿ ಕೊಲಂಬೋಗೆ ಬಂದಿರುವ ಜೈಶಂಕರ್ ಅವರು ಗುರುವಾರ ಶ್ರೀಲಂಕಾದ ಪ್ರಮುಖ ನಾಯಕತ್ವವನ್ನು ಭೇಟಿಯಾದರು. ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ಮತ್ತು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಜೊತೆಗೂ ಮಾತುಕತೆ ನಡೆಸಿದರು.

 ಜೈಶಂಕರ್ ಅವರು ಈ ವೇಳೆ ಶ್ರೀಲಂಕಾದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ಪುನರುಚ್ಛರಿಸಿದರು. ಅಲ್ಲದೇ ದೇಶದ ಸಾಲವನ್ನು ನಿರ್ವಹಿಸಲು  IMF ಗೆ ನೀಡಿದ ಭರವಸೆಗಾಗಿ ಶ್ರೀಲಂಕಾ  ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ. ಋಣಭಾರದಲ್ಲಿರುವ ದ್ವೀಪ ರಾಷ್ಟ್ರದ ಆರ್ಥಿಕ ಚೇತರಿಕೆಯನ್ನು ತ್ವರಿತಗೊಳಿಸಲು ಭಾರತ ಸಾಕಷ್ಟು ನೆರವು ನೀಡುತ್ತಿದೆ.

“ನನ್ನ ಸ್ನೇಹಿತ ಗೌರವಾನ್ವಿತ  ಡಾ. ಎಸ್. ಜೈಶಂಕರ್ ಅವರನ್ನು ಕೊಲಂಬೊದಲ್ಲಿ ಸ್ವಾಗತಿಸುವುದು ನನ್ನ ಸೌಭಾಗ್ಯ. ಕಳೆದ ವರ್ಷ USD 3.9B ಕ್ರೆಡಿಟ್ ಲೈನ್‌ನ ಉದಾರ ಬೆಂಬಲಕ್ಕಾಗಿ ಮತ್ತು ಸಾಲವನ್ನು ಪುನರ್ ರಚಿಸಲು IMF ಗೆ ನೀಡಿದ ಭರವಸೆಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಕಾಳಜಿಯುಳ್ಳ ಸ್ನೇಹಿತರನ್ನು ಹೊಂದಲು ಶ್ರೀಲಂಕಾ ಅದೃಷ್ಟ ಮಾಡಿದೆ” ಎಂದು ಸಬ್ರಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಎರಡು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದಲ್ಲಿ ಮಾಲ್ಡೀವ್ಸ್‌ನಿಂದ ಕೊಲಂಬೊಗೆ ಆಗಮಿಸಿದ ಜೈಶಂಕರ್, ಸಬ್ರಿ ಅವರನ್ನು ಭೇಟಿಯಾಗಿ ಪರಸ್ಪರ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ವಿಷಯಗಳ ಕುರಿತು ಚರ್ಚಿಸಿದರು.

ಕೊಲಂಬೊದಲ್ಲಿ ಇಂದು ಸಂಜೆ ವಿದೇಶಾಂಗ ಸಚಿವ ಅಲಿ ಸಬ್ರಿ ಮತ್ತು ಇತರ ಸಚಿವ ಸಹೋದ್ಯೋಗಿಗಳೊಂದಿಗೆ  ಸಭೆ ನಡೆಸಲಿದ್ದಾರೆ. ಮೂಲಸೌಕರ್ಯ, ಸಂಪರ್ಕ, ಇಂಧನ, ಕೈಗಾರಿಕೆ ಮತ್ತು ಆರೋಗ್ಯದಲ್ಲಿ ಭಾರತ-ಶ್ರೀಲಂಕಾ ಸಹಕಾರದ ಕುರಿತು ಚರ್ಚಿಸಲಾಗಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top