ಮಂಗಳೂರು: ದೇಶಸೇವೆ, ಜನಜಾಗೃತಿ, ಶಿಕ್ಷಣದ ಮೂಲಕ ರಾಷ್ಟ್ರೋತ್ಥಾನ ಸಾಹಿತ್ಯವು ರಾಜ್ಯದಲ್ಲಿ ಸಕ್ರಿಯ, ಕ್ರಿಯಾತ್ಮಕ ಕಾರ್ಯದಲ್ಲಿ ತೊಡಗಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕ ಡಾ.ಎಸ್.ಆರ್.ರಾಮಸ್ವಾಮಿ ಹೇಳಿದರು.
ಅವರು ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳವಾರ ಆರಂಭವಾದ ‘ಸಾಹಿತ್ಯ ಪ್ರದರ್ಶಿನಿ’ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮವು ಒಂದು ವಾರಗಳ ಕಾಲ ಮುಂದುವರೆಯಲಿದೆ.
ರಾಷ್ಟ್ರೋತ್ಥಾನವು ಸಾಹಿತ್ಯ ಬ್ರಾಂಡ್ನ ಕ್ರಿಯೇಷನ್ಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಅಲ್ಲದೇ ಸಂಶೋಧನಾ ಪರಿಷ್ಕಾರಗಳಿಂದ ರಾಷ್ಟ್ರೋತ್ಥಾನದ ಹೊತ್ತಿಗೆಗಳೂ ಆಕರ ಗ್ರಂಥಗಳಾಗಿ ರೂಪುಗೊಂಡಿವೆ ಎಂದು ಹೇಳಿದರು.
ಅಲ್ಲದೇ ಶಿಕ್ಷಣ ವಂಚಿತರಿಗೆ 35 ಶಿಕ್ಷಣ ಸಂಸ್ಥೆಗಳಲ್ಲಿ ಅನೌಪಚಾರಿಕ ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದೆ, ಆರ್ಥಿಕವಾಗಿ ಹಿಂದುಳಿದವರಿಗೆ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿಯನ್ನು ನೀಡುತ್ತಿದೆ. . ಭಾರತ-ಭಾರತಿ ಮಾಲಿಕೆ ಹಾಗೂ ಉತ್ಥಾನ ಮೂಲಕ ರಾಷ್ಟ್ರೋತ್ಥಾನವು ರಾಜದ ಜನರ ಮನೆ ಮನಗಳನ್ನು ತಲುಪಿದೆ ಎಂದರು.
ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರು ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಹಲವಾರು ರಾಷ್ಟ್ರನಾಯಕರ, ರಾಷ್ಟ್ರಭಕ್ತಿಯ ಪುಸ್ತಕಗಳನ್ನು ಓದಿ ಪುಳಕಿತನಾಗುತ್ತಿದೆ. ಆದರೆ ಆ ಎಲ್ಲಾ ಪುಸ್ತಕಗಳು ರಾಷ್ಟ್ರೋತ್ಥಾನ ಸಾಹಿತ್ಯದ್ದು ಎಂದು ನನಗೆ ಇವತ್ತೇ ತಿಳಿಯಿತು ಎಂದರು.
ಅಲ್ಲದೇ ರಾಷ್ಟ್ರೋತ್ಥಾನದ ಬರಹಗಳು ಮೈರೋಮಾಂಚನಗೊಳಿಸುತ್ತವೆ, ಎಲ್ಲೂ ದೊರೆಯದ ಬಲು ಅಪರೂಪದ ಮಾಹಿತಿಗಳು ಇದರಲ್ಲಿ ಅಡಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಹಿರಿಯ ಪ್ರಚಾರಕ ಮೈ.ಚ.ಜಯದೇವ, ಆರ್ಎಸ್ಎಸ್ ಪ್ರಾಂತ ಸಂಚಾಲಕ ಡಾ.ವಾಮನ ಶೆಣೈ, ವಿ.4 ಮೀಡಿಯಾ ನಿರ್ದೇಶಕ ಹರೀಶ್ ಕರ್ಕೇರಾ, ನಮ್ಮ ಟಿವಿ ನಿರ್ದೇಶಕ ಶಿವಶರಣ್ ಶೆಟ್ಟಿ ಉಪಸ್ಥಿತರಿದ್ದರು.
ಸೆ.21ರವರೆಗೆ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಪ್ರದರ್ಶಿನಿ ಹಾಗೂ ಮಾರಾಟ ವ್ಯವಸ್ಥೆಯಿದ್ದು, ಶಿಕ್ಷಣ ಸಂಸ್ಥೆಗಳಿಗೆ ಶೇ.20ರಷ್ಟು ರಿಯಾಯಿತಿಯಲ್ಲಿ ಪುಸ್ತಕಗಳನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.