News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗಿ ಕೇಸರಿ ಉಡುಪು ಅವಮಾನಿಸಿದ ಕಾಂಗ್ರೆಸ್‌ ನಾಯಕ: ಭಾರೀ ಆಕ್ರೋಶ

ಮುಂಬಯಿ: ಕೇಸರಿ ಕಂಡರೆ ಹುರಿದು ಬೀಳುವ ಕಾಂಗ್ರೆಸ್ಸಿಗರು ಸದಾ ಕೇಸರಿ ತೊಡುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಅವಮಾನಿಸಿದ್ದಾರೆ. ತಮ್ಮ ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಮುಂಬಯಿಗೆ ಭೇಟಿ ನೀಡಿರುವ ಯೋಗಿ ಆದಿತ್ಯನಾಥ್ ಅವರು ಕೇಸರಿ ಧರಿಸುವುದನ್ನು ಬಿಟ್ಟು ಆಧುನಿಕರಾಗಬೇಕು, ಆಗ ಮಾತ್ರ ಹೂಡಿಕೆ ಆಕರ್ಷಿಸಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಹುಸೇನ್ ದಳವಾಯಿ ಅವರು, ಕೇಸರಿ ಬಿಟ್ಟು ಮಾಡರ್ನ್‌ ಆಗಿ ಆಗ  ವ್ಯಾಪಾರಗಳು ಯುಪಿಗೆ ಬರುತ್ತವೆ ಎಂದು ಅವಹೇಳನಕಾರಿ ಮಾತನ್ನು ಯೋಗಿ ವಿರುದ್ಧ ಮಾತನಾಡಿ ವಿವಾದವನ್ನು ಹುಟ್ಟುಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ ಹುಸೇನ್ ದಳವಾಯಿ, ಬೇರೆ ರಾಜ್ಯದಿಂದ ವ್ಯಾಪಾರ ಮಾಡುವ ಬದಲು, ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುವ ಬದಲು ನಿಮ್ಮ ಸ್ವಂತ ರಾಜ್ಯದಲ್ಲಿ ವ್ಯಾಪಾರ ಪ್ರಾರಂಭಿಸಿ ಮತ್ತು ಅದಕ್ಕಾಗಿ ನಾನು ಯೋಗಿ ಆದಿತ್ಯನಾಥ್ ಜಿ ಅವರಿಗೆ ಕೇಸರಿ ಬಟ್ಟೆಗಳನ್ನು ತ್ಯಜಿಸಿ ಹೆಚ್ಚು ಆಧುನಿಕವಾಗಿರಿ ಮತ್ತು ಆಧುನಿಕ ಆಲೋಚನೆಗಳನ್ನು ಹೊಂದಿರಿ, ಆಗ ವ್ಯಾಪಾರಗಳು ಅಲ್ಲಿಗೆ ಬರುತ್ತವೆ ಎಂದು ಹೇಳಲು ಬಯಸುತ್ತೇನೆ” ಎಂದಿದ್ದಾರೆ.

ದಳವಾಯಿಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ರಾಮ್ ಕದಂ, “ಕಾಂಗ್ರೆಸ್ ನಾಯಕರ ಹೇಳಿಕೆಯು ಕೇಸರಿ ಧರಿಸುವ ಸಂತರಿಗೆ ಅವಮಾನವಲ್ಲವೇ? ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಿಗೆ ಏನಾಗಿದೆ? ಕೇಸರಿ ಬಣ್ಣಕ್ಕೆ ಅವರಿಗೇಕೆ ಆಕ್ಷೇಪ? ಕೇಸರಿ ಇದು ಕೇವಲ ಹಿಂದೂ ಧ್ವಜ ಅಥವಾ ಹಿಂದೂ ಸಂತರ ಉಡುಗೆಯ ಬಣ್ಣವಲ್ಲ, ಇದು ತ್ಯಾಗ, ಸಮರ್ಪಣೆ, ಜ್ಞಾನ, ಶುದ್ಧತೆ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಶಾಸಕ ಅತುಲ್ ಭಟ್‌ಖಾಲ್ಕರ್ ಮಾತನಾಡಿ, “ಇದು ಕಾಂಗ್ರೆಸ್ಸಿನ ಹಳೆ ಪದ್ಧತಿ.ಇಡೀ ದೇಶವನ್ನು ವಿಭಜಿಸಿದ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿ ಸ್ವಾತಂತ್ರ್ಯ ಬಂದ ನಂತರ ಮುಸ್ಲಿಮರ ಓಲೈಕೆಯಲ್ಲಿ ತೊಡಗಿತು. ಅಷ್ಟೇ ಅಲ್ಲ ಮಹಾರಾಷ್ಟ್ರದ ಕಾಂಗ್ರೆಸ್ ನವರು ಉತ್ತರ ಭಾರತದ ಬಗ್ಗೆ ದ್ವೇಷ ಹೊಂದಿದ್ದಾರೆ. ಭಾರತೀಯರು ಮತ್ತು ಬಿಹಾರಿಗಳು ಮತ್ತು ಎಲ್ಲಾ ರಾಜ್ಯದ ಜನರ ಬಗ್ಗೆ ಇವರಿಗೆ ದ್ವೇಷವಿದೆ. ಅದಕ್ಕಾಗಿಯೇ ಅವರು ಉತ್ತರ ಪ್ರದೇಶದ ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top