News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರತಿ ಭಾಷೆ ಕಲಿಯುವುದರಿಂದ ಸಂಬಂಧ ಬೆಸೆಯುತ್ತದೆ – ನಾರಾಯಣ್ ಚಾಂದಕ್

ಮಂಗಳೂರು: ಅಮೆರಿಕಾದ ಹಿಂದೂ ಸ್ವಯಂಸೇವಕ ಸಂಘದ ಒಂದು ವಿಭಾಗದ ಸಂಘಚಾಲಕರಾದ ನಾರಾಯಣ್ ಚಾಂದಕ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ಇಂದು ಭೇಟಿ ನೀಡಿದರು.

ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ವಿದ್ಯಾರ್ಥಿಗಳಿಂದ ನಡೆದ ಮಲ್ಲಕಂಬ, ಕೂಪಿಕಾ, ಸ್ಕೇಟಿಂಗ್, ಬೆಂಕಿ ಸಾಹಸ ಹಾಗೂ ಜಡೆಕೋಲಾಟ ಪ್ರದರ್ಶನ ವೀಕ್ಷಿಸಿದರು.

ನಂತರ ಮಾತನಾಡಿದ ಇವರು, “ವಿದ್ಯಾರ್ಥಿಗಳಾದ ನೀವು ಮಧುರವಾದ, ಸುಂದರವಾದ, ಭಾವನಾತ್ಮಕವಾದ ಮಾತೃಭಾಷೆ ಕನ್ನಡವನ್ನು ಕರ್ನಾಟಕದಂತಹ ಮಹಾಕ್ಷೇತ್ರದಲ್ಲಿ ಕಲಿಯುವ ವರದಾನವನ್ನು ಮಾತೆ ಸರಸ್ವತಿಯು ನಿಮಗೆ ನೀಡಿದ್ದಾಳೆ. ನಾವು ಪ್ರತಿ ಭಾಷೆ ಕಲಿಯುವುದರಿಂದ ಆ ಭಾಷೆ ಬಲ್ಲವರ ಅಂತಃಕರಣದೊಂದಿಗೆ ಸಂಬಂಧವನ್ನು ಬೆಸೆದುಕೊಳ್ಳುತ್ತೇವೆ. ಎಲ್ಲಿ ಸಂಸ್ಕಾರ ಶಕ್ತಿ, ಸಂಘಟನಾ ಶಕ್ತಿ, ಧ್ಯಾನ ಶಕ್ತಿ, ಮಂತ್ರ ಶಕ್ತಿ, ಒಳ್ಳೆಯ ಕಾರ್ಯ ಇರುತ್ತದೆಯೋ ಅಲ್ಲಿ ಸುರಕ್ಷತೆ ಸದಾ ಇದ್ದೇ ಇರುತ್ತದೆ. ಅಂತಹ ಪುಣ್ಯ ಸ್ಥಳದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ನೀವೇ ಪುಣ್ಯವಂತರು” ಎಂದು ಶ್ಲಾಘಿಸಿದರು.

ಮುಂಬೈನ ಉದ್ಯಮಿಗಳು ಆಗಿರುವ ನಾರಾಯಣ್ ಬಿ. ಶೆಟ್ಟಿ ಇವರು ಮಾತನಾಡಿ “ಸಂಸ್ಥೆಯಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಜೀವನದಲ್ಲಿ ಉತ್ತಮವಾದ ಶ್ರೇಯಸ್ಸನ್ನು ಗಳಿಸಿ” ಎಂದು ಶುಭ ಹಾರೈಸಿದರು.

ಅಮೇರಿಕಾದಲ್ಲಿ ಉದ್ಯಮಿಯಾಗಿರುವಂತಹ ಸಂದೇಶ ಹೆಗಡೆ ಅವರು ಮಾತನಾಡಿ, ಈ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ನೀವೇ ಅದೃಷ್ಟವಂತರು ಎನ್ನುತ್ತಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪಚಾರ ಪ್ರಮುಖರು ಸುನಿಲ್ ಕುಲಕರ್ಣಿ, ಮಾತನಾಡಿ “ಶಿಕ್ಷಕರು ನಿಮಗೋಸ್ಕರ ಪಡುತ್ತಿರುವ ಶ್ರಮವನ್ನು ಅರಿತು ನೀವು ಶ್ರಮಪಟ್ಟು ಚೆನ್ನಾಗಿ ಓದಿ ಜೀವನದಲ್ಲಿ ಉತ್ತಮವಾಗಿ ಸಾಧನೆಯನ್ನು ಮಾಡಿ ಹಾಗೂ ಇಲ್ಲಿ ಸಿಗುತ್ತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೀವು ಕಲಿತಿರುವ ಶಾಲೆಗೆ ಕೀರ್ತಿ ತನ್ನಿ” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರು ಡಾ | ಪ್ರಭಾಕರ್ ಭಟ್ ಕಲ್ಲಡ್ಕ, ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರು ರಮೇಶ್ ಎನ್ ಹಾಗೂ ಶ್ರೀರಾಮ ಪ್ರೌಢಶಾಲೆಯ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top