ಮಂಗಳೂರು : 1965ರಲ್ಲಿ ‘ರಣವೀಳ್ಯ’ ಎಂಬ – ಭಾರತೀಯ ವೀರಯೋಧರ ಸಾಹಸಕಥನ – ಪುಸ್ತಕವನ್ನು ಪ್ರಕಟಿಸುವ ಮೂಲಕ ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯವನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿದ ‘ರಾಷ್ಟ್ರೊತ್ಥಾನ ಸಾಹಿತ್ಯ’ಕ್ಕೆ ಈಗ ಐವತ್ತರ ಸಂಭ್ರಮ. ಈ ಪ್ರಯುಕ್ತ ‘ರಾಷ್ಟ್ರೊತ್ಥಾನ ಸಾಹಿತ್ಯ’ದ ಸಾಹಿತ್ಯ ಮಾರಾಟವು ನಗರದ ಸಂಘನಿಕೇತನದಲ್ಲಿ ನಡೆಯಲಿದೆ.
ಸೆ.15 ರಿಂದ ಸೆ21 ರ ವರೆಗೆ ಸಾಹಿತ್ಯ ಮಾರಾಟವು ನಗರದ ಸಂಘನಿಕೇತನದ ಮೊದಲ ಮಹಡಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಸಂಘನಿಕೇತನ ಇದರ ಸಹಯೋಗದಲ್ಲಿ ನಡೆಯಲಿದೆ. ಇದರ ಅಂಗವಾಗ ಇಂದು ಸಂಜೆ 5-30ಕ್ಕೆ ‘ಸಾಹಿತ್ಯ ಪ್ರದರ್ಶಿನಿ’ಯ ಉದ್ಘಾಟನೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ V-4 ಮೀಡಿಯಾದ ನಿರ್ದೇಶಕರಾದ ಶ್ರೀ ಹರೀಶ್ ಕರ್ಕೇರಾ, ‘ನಮ್ಮ ಟಿವಿ’ ನಿರ್ದೇಶಕರಾದ ಡಾ|| ಶಿವಶರಣ ಶೆಟ್ಟಿ, ಮಂಗಳೂರು ಪ್ರೆಸ್ಕ್ಲಬ್ನ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಅನಿಲ್ ಫರ್ನಾಂಡಿಸ್ ರವರು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಮೈ.ಚ. ಜಯದೇವರು ಉಪಸ್ಥಿತರಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಗೌ|| ಪ್ರಧಾನ ಸಂಪಾದಕರಾದ ಡಾ|| ಎಸ್. ಆರ್. ರಾಮಸ್ವಾಮಿಯವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ ಎಂದು ನಾ ದಿನೇಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸಾಹಿತ್ಯ ಪ್ರದರ್ಶಿನಿ’ಯ ವಿಷೇಶತೆ:
1. ಈವರೆಗೆ ಪ್ರಕಟವಾಗಿರುವ ೨೦೦ಕ್ಕೂ ಹೆಚ್ಚು ಪುಸ್ತಕಗಳ ಹಿಂದಿನ ಶ್ರಮ, ತಪಸ್ಸಿನ ಅನಾವರಣ.
2. ಸ್ವಾತಂತ್ರ್ಯ ಹೋರಾಟದ ಬೆಳಕು ಕಾಣದ ಸಂಗತಿಗಳು, ದೇಶ ವಿಭಜನೆಯ ಸನ್ನಿವೇಶ, 1975ರ ತುರ್ತು ಪರಿಸ್ಥಿತಿ ಹೀಗೆ ಮಹತ್ವದ ಐತಿಹಾಸಿಕ ವಿದ್ಯಮಾನಗಳ ತಳಸ್ಪರ್ಶ ಅಧ್ಯಯನಗಳ ಪುಸ್ತಕಗಳು ಹೊರಬಂದ ಕಥೆ (ಹಸ್ತಪ್ರತಿ).
3. ದಾಖಲೆ ಮಾರಾಟ ಕಂಡ ಭುಗಿಲು, ಆತ್ಮಾಹುತಿ, ಅಜೇಯ, ಅದಮ್ಯ, ಯುಗಾವತಾರ, ಕೋಲ್ಮಿಂಚು ಪುಸ್ತಕಗಳ ಬಗ್ಗೆ ಅಪರೂಪದ ಮಾಹಿತಿ.
4. ವಿಶಿಷ್ಟ ಚಿಂತಕರೆನಿಸಿದ ರಾಮಸ್ವರೂಪ, ಸೀತಾರಾಂ ಗೋಯೆಲ್, ಅರುಣ್ಶೌರಿ, ಹೊ.ವೆ. ಶೇಷಾದ್ರಿ, ಡಾ|| ಎಸ್.ಆರ್. ರಾಮಸ್ವಾಮಿರವರ ಪುಸ್ತಕ ಸರಣಿಗಳ ಪಕ್ಷಿನೋಟ.
5. ಕಣ್ಣಿಗೆ ಕಟ್ಟುವಂತೆ ಕಥೆಗಳನ್ನು ಚಿತ್ರಿಸಿದ ಶಿವರಾಮು, ಬಾಬುಕೃಷ್ಣಮೂರ್ತಿ, ವಿದ್ಯಾನಂದ ಶೆಣೈರವರ ಪುಸ್ತಕಗಳ ವಿಶಿಷ್ಟ ಪರಿಚಯ.
6. ಲಕ್ಷಾಂತರ ಪ್ರತಿಗಳ ದಾಖಲೆ ಮಾರಾಟ ಕಂಡ ಭಾರತ-ಭಾರತಿ ಮಕ್ಕಳ ಪುಸ್ತಕಗಳ 600ಕ್ಕೂ ಹೆಚ್ಚು ಪ್ರಕಟಣೆಗಳನ್ನು ಒಟ್ಟಿಗೆ ನೋಡುವ ಅವಕಾಶ.
7. ಜನಮನ ಸೂರೆಗೊಂಡ ಹಾಡುಗಳು, ಭಾಷಣಗಳು ಸಿಡಿ ರೂಪದಲ್ಲಿ.- ಇವು ಪ್ರಮುಖವಾಗಿ ಇರಲಿವೆ. ಈ ಎಲ್ಲ ಮಾಹಿತಿ-ಚಿತ್ರ-ಪ್ರತಿಗಳ ಮೂಲಕ, ಕನ್ನಡದಲ್ಲಿ ರಾಷ್ಟ್ರೀಯಸಾಹಿತ್ಯ ಪ್ರಕಟನೆ, ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡ ಐವತ್ತು ವರ್ಷಗಳ ಹೆಜ್ಜೆಗುರುತುಗಳನ್ನು ಸಾರ್ವಜನಿಕರ ಎದುರು ಇಡುವ ಪ್ರಯತ್ನ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.