News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತರಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ಅತಿದೊಡ್ಡ ಗೋಶಾಲೆ

ಆಗ್ರಾ: ಉತ್ತರಪ್ರದೇಶದಲ್ಲಿ ಅತಿದೊಡ್ಡ ಅತ್ಯಾಧುನಿಕ ಗೋಶಾಲೆಯನ್ನು ಸ್ಥಾಪಿಸುವುದಾಗಿ  ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ಘೋಷಿಸಿದ್ದಾರೆ.

800 ಬಿಘಾ ಭೂಮಿಯಲ್ಲಿ ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ 5,000 ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ಸಾಕುವ ಸಾಮರ್ಥ್ಯವನ್ನು ಈ ಗೋಶಾಲೆ ಹೊಂದಲಿದೆ, ಈ ಉದ್ದೇಶಿತ ಗೋವು ಅಭಯಾರಣ್ಯವು ಮುಜಾಫರ್‌ನಗರ ಜಿಲ್ಲೆಯ ಚಂದನ್ ಗ್ರಾಮದ ಸೋಲಾನಿ ನದಿಯ ದಡದಲ್ಲಿ ಸ್ಥಾಪನೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಸ್ಥಳೀಯ ಸಂಸದರೂ ಆದ ಬಲ್ಯನ್ ಅವರು ದೆಹಲಿಯಿಂದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಭಾನುವಾರ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, “ಮುಂದಿನ ಆರು ತಿಂಗಳಲ್ಲಿ ಗೋಧಾಮವನ್ನು ಪೂರ್ಣಗೊಳಿಸಬೇಕು ಮತ್ತು ಮುಜರಾಯಿ ನಗರದ ಬೀದಿಗಳಲ್ಲಿ ಅಥವಾ ಜಮೀನಿನಲ್ಲಿ ಬಿಡಾಡಿ ದನಗಳು ಕಂಡುಬರದಂತೆ ನೋಡಿಕೊಳ್ಳಬೇಕು. ಈ ಯೋಜನೆಗಾಗಿ ಜಿಲ್ಲಾ ಮಟ್ಟದಲ್ಲಿ ಸಂಚಾಲನಾ ಸಮಿತಿಯನ್ನು ರಚಿಸಲಾಗುವುದು” ಎಂದಿದ್ದಾರೆ.

‘ಗೌಶಾಲಾ’ ಸಂಕೀರ್ಣವು ಪ್ರಾಣಿಗಳಿಗೆ ಆಧುನಿಕ ಸ್ಮಶಾನ, ಜೈವಿಕ ಅನಿಲ ಘಟಕ, ದೊಡ್ಡ ನೀರಿನ ಟ್ಯಾಂಕ್ ಮತ್ತು ಮೇವು ಸಂಗ್ರಹಿಸಲು ಉಗ್ರಾಣವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.

ಪಶುಸಂಗೋಪನಾ ಇಲಾಖೆಯು ಪ್ರಾಯೋಗಿಕ ಯೋಜನೆಯನ್ನು ಸಿದ್ಧಪಡಿಸಿ ನಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಿದ್ದು, ಈಗಾಗಲೇ ಉದ್ದೇಶಿತ ಅಭಯಾರಣ್ಯಕ್ಕಾಗಿ ಪುರ್ಕಾಜಿ ಪ್ರದೇಶದಲ್ಲಿ ವಿಸ್ತಾರವಾದ ಪ್ರದೇಶವನ್ನು ಗುರುತಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top