News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಧರಿಗೆ ಬಗ್ಗೆ ಅಪಮಾನದ ಭಾಷೆ ಬಳಕೆ ಸರಿಯಲ್ಲ: ರಾಹುಲ್‌ಗೆ ಜೈಶಂಕರ್

ನವದೆಹಲಿ: ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ಘರ್ಷಣೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಇಂದು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ನಮ್ಮ ಯೋಧರಿಗೆ ಹೊಡಿಯಲಾಯಿತು ಎಂಬ ಪದವನ್ನು ಬಳಸುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.

“ರಾಜಕೀಯ ಟೀಕೆಗಳಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಆದರೆ ನಾವು ನಮ್ಮ ಯೋಧರನ್ನು ಅಗೌರವಗೊಳಿಸಬಾರದು. ನನ್ನ ಸ್ವಂತ ತಿಳುವಳಿಕೆಯನ್ನು ಆಳಗೊಳಿಸಬೇಕು ಎಂಬ ಸಲಹೆಯನ್ನು ನಾನು ಕೇಳಿದೆ. ಆದರೆ ಯಾರು ಸಲಹೆ ನೀಡುತ್ತಾರೆ ಎಂದು ನೋಡಿದಾಗ ಏನೂ ತೋಚದೆ ತಲೆಬಾಗಿ ಗೌರವಿಸಿದೆ. ನಮ್ಮ ಯೋಧರಿಗೆ ಹೊಡೆಯಲಾಯಿತು ಪದವನ್ನು ಬಳಸಬಾರದು” ಎಂದು ಜೈಶಂಕರ್ ಪರೋಕ್ಷವಾಗಿ ರಾಹುಲ್‌ ಗಾಂಧಿಗೆ ಕಿವಿಮಾತು ಹೇಳಿದ್ದಾರೆ.

“ಭಾರತ್ ಜೋಡೋ ಯಾತ್ರೆ” ಸಮಯದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, “ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಭಾರತೀಯ ಯೋಧರನ್ನು ಚೀನಾ ಸೇನಾ ಪಡೆಗಳು ಹೊಡೆದು ಹಾಕುತ್ತಿವೆ” ಎಂದಿದ್ದರು. ಈ ಮಾತಿನ ಧಾಟಿಗೆ ಜೈಶಂಕರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ನಾವು ಚೀನಾದ ಬಗ್ಗೆ ಅಸಡ್ಡೆ ಹೊಂದಿದ್ದರೆ, ಭಾರತೀಯ ಸೇನೆಯನ್ನು ಗಡಿಗೆ ಕಳುಹಿಸಿದವರು ಯಾರು. ನಾವು ಚೀನಾದ ಬಗ್ಗೆ ಅಸಡ್ಡೆ ಹೊಂದಿದ್ದರೆ ಇಂದು  ಚೀನಾವನ್ನು ಉಲ್ಬಣಗೊಳಿಸುವಿಕೆ ಮತ್ತು ನಿಯೋಜನೆಯಿಂದ ಹಿಂದೆ‌ಸರಿಯುವಂತೆ ಏಕೆ ಒತ್ತಾಯಿಸುತ್ತಿದ್ದೇವೆ? ನಮ್ಮ ಸಂಬಂಧಗಳು ಸಹಜವಾಗಿಲ್ಲ ಎಂದು ನಾವು ಸಾರ್ವಜನಿಕವಾಗಿ ಏಕೆ ಹೇಳುತ್ತಿದ್ದೇವೆ? ಸಚಿವರು ಪ್ರಶ್ನಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top