News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀಲಂಕಾ ಭೇಟಿಯಲ್ಲಿ ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್

ಕೊಲಂಬೋ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಶ್ರೀಲಂಕಾಕ್ಕೆ ತಮ್ಮ 4 ದಿನಗಳ ಭೇಟಿಯನ್ನು ಪ್ರಾರಂಭಿಸಿದ್ದಾರೆ. ಅವರ ಭೇಟಿಯು ಶ್ರೀಲಂಕಾದೊಂದಿಗೆ ಭಾರತದ ಕಡಲ ಸಹಕಾರದ ಸಂಕೇತವಾಗಿದೆ.

ಹರಿ ಕುಮಾರ್ ಗೋವಾ ಶಿಪ್‌ಯಾರ್ಡ್ ನಿರ್ಮಿಸಿದ ಸರಯು ವರ್ಗದ ಸುಧಾರಿತ ಕಡಲಾಚೆಯ ಗಸ್ತು ನೌಕೆ ಎಸ್‌ಎಲ್‌ಎನ್‌ಎಸ್ ಸಿಂಧೂರಲಾವನ್ನು ಪರಿಶೀಲಿಸಿದರು. ಈ ಹಡಗು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.

‌ಅಲ್ಲದೇ ಶ್ರೀಲಂಕಾ ನೌಕಾಪಡೆಗೆ ಭಾರತೀಯ ಸ್ಥಳೀಯ ರಕ್ಷಣಾ ವಸ್ತುಗಳನ್ನು ಅವರು ಹಸ್ತಾಂತರಿಸಿದ್ದಾರೆ.

ಅವರು ಇಂದು ಐಪಿಕೆಎಫ್ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಲಿದ್ದಾರೆ.

ಹರಿ ಕುಮಾರ್ ನಾಳೆ ಶ್ರೀಲಂಕಾದ ನಾಯಕತ್ವದೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅವರು ಟ್ರಿಂಕೋಮಲಿಯಲ್ಲಿರುವ  ನೌಕಾಪಡೆಯ ಅಕಾಡೆಮಿಗೆ ತೆರಳುತ್ತಾರೆ ಎಂದು ವರದಿಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಐಎನ್‌ಎಸ್ ಸಹ್ಯಾದ್ರಿ ಕೂಡ ಕೊಲಂಬೊ ತಲುಪಿದೆ. ಇದು ಶಿವಾಲಿಕ್ ವರ್ಗದ ಬಹು ಪಾತ್ರದ ಯುದ್ಧನೌಕೆಯಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top