ಬೆಳ್ತಂಗಡಿ : ನೇತ್ರಾವತಿ ಮೂಲವನ್ನೇ ಬತ್ತಿಸಲಿರುವ ಎತ್ತಿನಹೊಳೆ(ನೇತ್ರಾವತಿ) ನದಿ ತಿರುವುಯೋಜನೆಗೆ ಬೆಳ್ತಂಗಡಿ ತಾಲೂಕು ಹಿತರಕ್ಷಣಾ ವೇದಿಕೆ ತ್ರೀರ್ವವಾದ ವಿರೋಧವನ್ನು ವ್ಯಕ್ತಪಡಿಸಿದೆ. ಗುರುವಾರ ನಡೆದ ವೇದಿಕೆಯ ಸಭೆಯಲ್ಲಿ ವಿರೋಧದ ಮತ್ತು ಹೆದ್ದಾರಿ ತಡೆಗೆ ಬೆಂಬಲದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಯೋಜನೆಯಿಂದ ಜಿಲ್ಲೆಯಲ್ಲಿ ಅಂತರ್ ಜಲಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಯೋಜನೆಯ ಬಗ್ಗೆ ಅಧ್ಯಯನ ವರದಿ ನೀಡಬೇಕು. ಈ ಯೋಜನಾ ಪ್ರದೇಶ ಆನೆಕಾರಿಡಾರ್ ವ್ಯಾಪ್ತಿಯಲ್ಲಿದ್ದು ಇದು ಉಳಿಯಬೇಕು. ಯೋಜನೆಗೆಒಂದು ಲಕ್ಷಕೋಟಿ ರೂಪಾಯಿ ಜನರ ಹಣವನ್ನು ಹೂಡಿಕೆ ಮಾಡಲಾಗುತ್ತದೆ.ಯೋಜನೆ ವಿಫಲವಾದರೆ ಈ ನಷ್ಟವನ್ನು ಯಾರು ತುಂಬಿಸುತ್ತಾರೆ ?ಈ ಯೋಜನೆಯಿಂದ ಮೀನುಗಾರಿಕೆಗೂ ತೊಂದರೆಯಾಗಲಿದೆ.
ಎತ್ತಿನ ಹೊಳೆ ನೀರನ್ನು ಪಾಲಾರ್ ನದಿಗೆ ಸೇರಿಸುವ ಯೋಜನೆ ಇದೆ.ಇದುಅಂತರ್ರಾಜ್ಯ ಜಲವಿವಾದಕ್ಕೆಕಾರಣವಾಗಲಿದೆ. ಹೀಗಾಗಿ ವೇದಿಕೆ ಯೋಜನೆಯ ರದ್ದತಿಗಾಗಿ ಆಗ್ರಹಿಸುತ್ತದೆಯಲ್ಲದೆ ಸೆ. 15 ರಂದು ನಡೆಯುವರಾಷ್ಟ್ರೀಯ ಹೆದ್ದಾರಿ ತಡೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ವೇದಿಕೆಯ ಕಾರ್ಯದರ್ಶಿ ವಕೀಲ ಬಿ.ಕೆ.ಧನಂಜಯರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.