ನವದೆಹಲಿ: ಅರವಿಂದ್ ಕೇಜ್ರಿವಾಲ್ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಬಿಜೆಪಿ ಭಾನುವಾರ ‘ದಿಲ್ಲಿ ಕಾ ಲಡ್ಕಾ’ ಎಂಬ ಕಾರ್ಟೂನ್ ಸರಣಿಯನ್ನು ಬಿಡುಗಡೆ ಮಾಡಿದೆ.
ದೆಹಲಿಯ ನಗರ ಪಾಲಿಕೆ ಚುನಾವಣೆಗೂ ಒಂದು ವಾರ ಮುಂಚಿತವಾಗಿ ಈ ಸರಣಿಯನ್ನು ಬಿಡುಗಡೆ ಮಾಡಲಾಗಿದೆ.
ಎಎಪಿ ಸರ್ಕಾರದ ಪೇಯ್ಡ್ ಪ್ರಚಾರಕ್ಕೆ ಟಾಂಗ್ ಕೊಡುವ ರೀತಿಯಲ್ಲಿರುವ ಈ ಸೃಜನಶೀಲ ಕಾರ್ಟೂನ್ ಬಿಜೆಪಿ ಆಡಳಿತವಿರುವ ನಗರಪಾಲಿಕೆಗಳ ಕೆಲಸದ ಬಗ್ಗೆ ಮಾತನಾಡುತ್ತದೆ ಮತ್ತು ಕೇಜ್ರಿವಾಲ್ ಅವರ ಪೇಯ್ಡ್ ಪ್ರಚಾರವನ್ನು ಬಹಿರಂಗಪಡಿಸಿದೆ.
ಈ ಕಾರ್ಟೂನ್ ಸರಣಿ ಕೇಜ್ರಿವಾಲ್ ಮತ್ತು ಅವರ ಪಕ್ಷದ ನಿಜ ಮುಖವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿಯ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಆಶಿಶ್ ಸೂದ್ ಹೇಳಿದ್ದಾರೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ 250 ವಾರ್ಡ್ಗಳಿಗೆ ಡಿಸೆಂಬರ್ 4 ರಂದು ಚುನಾವಣೆ ನಡೆಯಲಿದೆ.
गरीबों के सपने का सम्मान हुआ,
जहां झुग्गी थी, वहां मकान हुआ। pic.twitter.com/1LBuuYzbFP— BJP Delhi (@BJP4Delhi) November 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.