ನವದೆಹಲಿ: 26/11 ಮುಂಬೈ ಭಯೋತ್ಪಾದನಾ ದಾಳಿಯ ಕರಾಳ ನೆನಪಿಗೆ ಇಂದು 14 ನೇ ವರ್ಷ. ದಾಳಿಯ ವೇಳೆ ಅಪ್ರತಿಮ ಶೌರ್ಯ ಪ್ರದರ್ಶಸಿದ ಮತ್ತು ಪ್ರಾಣತೆತ್ತ ವೀರ ಯೋಧರನ್ನು ದೇಶ ಇಂದು ಸ್ಮರಿಸುತ್ತಿದೆ.
ಭಾರತವು 26/11 ದಾಳಿಯನ್ನು ಸ್ಮರಿಸುತ್ತಿರುವ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು “ಈ ದಾಳಿಯನ್ನು ಯೋಜಿಸಿದ ಮತ್ತು ಮೇಲ್ವಿಚಾರಣೆ ಮಾಡಿದವರನ್ನು ನ್ಯಾಯಾಂಗದ ಮುಂದೆ ತರಬೇಕು” ಎಂದು ಟ್ವೀಟ್ ಮಾಡಿದ್ದಾರೆ.
166 ಜನರ ಸಾವಿಗೆ ಕಾರಣವಾದ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡ ಅಮಾನವೀಯ ದಾಳಿಯ ಚಿತ್ರಗಳನ್ನು ಒಳಗೊಂಡಿರುವ ಕಿರು ವೀಡಿಯೊವನ್ನು ಹಂಚಿಕೊಂಡಿರುವ ಜೈಶಂಕರ್, “ವಿಶ್ವದಾದ್ಯಂತ ಭಯೋತ್ಪಾದನೆಯ ಪ್ರತಿಯೊಬ್ಬ ಬಲಿಪಶುವಿಗೆ ನಾವು ತಲೆಬಾಗುತ್ತೇವೆ” ಎಂದು ಹೇಳಿದರು.
“ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ, ದಾಳಿಯ ಆಘಾತವನ್ನು ನೆನಪಿಟ್ಟುಕೊಳ್ಳುವುದು ಮತ್ತು ಭಯೋತ್ಪಾದನೆಯ ಅಪರಾಧಿಗಳನ್ನು ನ್ಯಾಯಾಂಗದ ಮುಂದೆ ತರಲು ಪರಿಶ್ರಮ ಪಡುವುದು ನಮ್ಮ ಮೇಲೆ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
1 ನಿಮಿಷ-36 ಸೆಕೆಂಡ್ ಅವಧಿಯ ವೀಡಿಯೊ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ – “ಒಂದು ದಾಳಿಯು ಸಹ ಹಲವು ಎಂದು ನಾವು ಪರಿಗಣಿಸುತ್ತೇವೆ. ಒಂದೇ ಒಂದು ಜೀವವನ್ನು ಕಳೆದುಕೊಂಡರೂ ಸಹ ಅಪಾರ. ಆದ್ದರಿಂದ, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ” ಎಂದಿದ್ದಾರೆ.
Terrorism threatens humanity.
Today, on 26/11, the world joins India in remembering its victims. Those who planned and oversaw this attack must be brought to justice.
We owe this to every victim of terrorism around the world. pic.twitter.com/eAQsVQOWFe
— Dr. S. Jaishankar (@DrSJaishankar) November 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.