ಮುಂಬೈ: ಸುಮಾರು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ಟ್ರದ ಸುಲ್ತಾನ್ಪುರ ಗ್ರಾಮವನ್ನು ಈಗ ‘ರಾಹುಲ್ ನಗರ’ ಎಂದು ಬದಲಾಯಿಸಲಾಗಿದೆ. ಸ್ಥಳೀಯ ನಿವಾಸಿಗಳೇ ಸೇರಿ ತಮ್ಮ ಗ್ರಾಮದ ಹೆಸರನ್ನು ಬದಲಾಯಿಸಿದ್ದಾರೆ. 2008 ರ 26/11 ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಹುತಾತ್ಮರಾದ ಪೊಲೀಸ್ ರಾಹುಲ್ ಶಿಂಧೆ ಅವರ ಸ್ಮರಣಾರ್ಥ ಗ್ರಾಮಕ್ಕೆ ಈ ಹೆಸರನ್ನು ಇಡಲಾಗಿದೆ.
14 ವರ್ಷಗಳ ಹಿಂದೆ ನಡೆದ ಭಯೋತ್ಪಾದಕ ದಾಳಿಯಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್ಆರ್ಪಿಎಫ್) ಕಾನ್ಸ್ಟೆಬಲ್ ರಾಹುಲ್ ಶಿಂಧೆ ಹುತಾತ್ಮರಾಗಿದ್ದರು. ಸೋಲಾಪುರ ಜಿಲ್ಲೆಯ ಮಾಧಾ ತಹಸಿಲ್ನ ಸುಲ್ತಾನ್ಪುರದವರಾದ ಶಿಂಧೆ, ಭಯೋತ್ಪಾದಕರ ದಾಳಿಯ ಬಳಿಕ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ಗೆ ಪ್ರವೇಶಿಸಿದ ಮೊದಲ ಪೊಲೀಸ್ ಸಿಬ್ಬಂದಿಗಳಲ್ಲಿ ಒಬ್ಬರು. ಭಯೋತ್ಪಾದಕರು ಶಿಂಧೆ ಅವರ ಹೊಟ್ಟೆಗೆ ಗುಂಡು ಹಾರಿಸಿದ ಪರಿಣಾಮ ಅವರು ಸ್ಥಳದಲ್ಲೇ ಹುತಾತ್ಮರಾಗಿದ್ದರು.
ಅವರ ಅತ್ಯುನ್ನತ ತ್ಯಾಗಕ್ಕಾಗಿ ಮರಣೋತ್ತರವಾಗಿ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡುವ ಮೂಲಕ ಸರ್ಕಾರ ಅವರನ್ನು ಗೌರವಿಸಿದರೆ, ಸುಲ್ತಾನಪುರದ ನಿವಾಸಿಗಳು ತಮ್ಮ ಗ್ರಾಮದ ಹೆಸರನ್ನೇ ಅವರ ಸ್ಮರಣಾರ್ಥ ಮರುನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಆದರೆ ಅಧಿಕೃತ ಮರುನಾಮಕರಣ ಸಮಾರಂಭ ಇನ್ನಷ್ಟೇ ನಡೆಯಬೇಕಿದೆ.
26/11 ದಾಳಿಯ 14 ನೇ ವಾರ್ಷಿಕೋತ್ಸವದ ಮುನ್ನಾದಿನವಾದ ಇಂದು ದಿವಂಗತ ರಾಹುಲ್ ಶಿಂಧೆ ಅವರ ತಂದೆ ಸುಭಾಷ್ ವಿಷ್ಣು ಶಿಂಧೆ ಮಾತನಾಡಿ, “ಗ್ರಾಮವನ್ನು ಮರುನಾಮಕರಣ ಮಾಡುವ ಎಲ್ಲಾ ಸರ್ಕಾರಿ ಔಪಚಾರಿಕತೆಗಳು ಮುಗಿದಿವೆ. ನಾವು ಈಗ ಅಧಿಕೃತ ಮರುನಾಮಕರಣ ಸಮಾರಂಭಕ್ಕಾಗಿ ಕಾಯುತ್ತಿದ್ದೇವೆ” ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.