ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ ಗೌರವ್ ದ್ವಿವೇದಿ ಇಂದು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ದ್ವಿವೇದಿ ಅವರು ಛತ್ತೀಸ್ಗಢ ಕೇಡರ್ನ 1995 ಬ್ಯಾಚ್ನ ಐಎಎಸ್ ಅಧಿಕಾರಿ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಐದು ವರ್ಷಗಳ ಅವಧಿಗೆ ಪ್ರಸಾರ ಭಾರತಿ ಸಿಇಓ ಆಗಿ ನೇಮಿಸಲ್ಪಟ್ಟಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ದ್ವಿವೇದಿ ಅವರು ಮಾತನಾಡಿ, ಪ್ರಸಾರ ಭಾರತಿಯ ಎರಡು ಘಟಕಗಳಾದ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಇನ್ನೂ ಅತ್ಯಂತ ವಿಶ್ವಾಸಾರ್ಹ ಮತ್ತು ನಂಬಿಕೆಯ ಬ್ರ್ಯಾಂಡ್ ಎಂದು ಪರಿಗಣಿಸಲಾಗಿದೆ. ಎರಡು ವಿಭಾಗಗಳನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ದ್ವಿವೇದಿ ಅವರು ಸರ್ಕಾರದ ನಾಗರಿಕ ತೊಡಗಿಸುವಿಕೆ ವೇದಿಕೆಯಾದ MyGovIndia ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆಡಳಿತದಲ್ಲಿ ಅವರ ಅತ್ಯುತ್ತಮ ಕೆಲಸಕ್ಕಾಗಿ ಅವರಿಗೆ ಪ್ರಧಾನ ಮಂತ್ರಿ ಪ್ರಶಸ್ತಿ ಲಭಿಸಿದೆ.
ಶಶಿ ಶೇಖರ್ ವೆಂಪಾಟಿ ಅವರು 2017 ರಿಂದ 2022 ರವರೆಗೆ ಪ್ರಸಾರ ಭಾರತಿಯ ಸಿಇಒ ಆಗಿದ್ದರು. ವೆಂಪತಿ ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ, ದೂರದರ್ಶನದ ಮಹಾನಿರ್ದೇಶಕ ಮಯಾಂಕ್ ಅಗರವಾಲ್ ಅವರಿಗೆ ಈ ವರ್ಷದ ಜೂನ್ನಲ್ಲಿ ಪ್ರಸಾರ ಭಾರತಿಯ ಹೆಚ್ಚುವರಿ ಪ್ರಭಾರವನ್ನು ನೀಡಲಾಯಿತು. ಇದೀಗ ದ್ವಿವೇದಿ ಅವರು ನೂತನ ಸಿಇಓ ಆಗಿ ಅಧಿಕಾರವಧಿ ಆರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.