ಜೈಪುರ: ಉತ್ತರ ಪ್ರದೇಶದ ಮೀರತ್ನಲ್ಲಿ 400 ಹಿಂದೂಗಳ ಮತಾಂತರದ ಷಡ್ಯಂತ್ರ ಬಹಿರಂಗವಾದ ನಂತರ, ಇದೀಗ ರಾಜಸ್ಥಾನದಿಂದಲೂ ಇಂತಹುದೇ ಸುದ್ದಿ ಬಂದಿದೆ. ಅಲ್ಲಿ ಸಾಮೂಹಿಕ ಮತಾಂತರದ ಮತ್ತೊಂದು ಉದಾಹರಣೆ ಕಂಡುಬಂದಿದೆ. ಹಿಂದುತ್ವವಾದಿ ಸಂಘಟನೆ ‘ಧರ್ಮ ಜಾಗರಣ್ ಮಂಚ್’ ರಾಜಸ್ಥಾನದಲ್ಲಿ ಸಾಮೂಹಿಕ ಮತಾಂತರದ ಬಗ್ಗೆ ಮಾಹಿತ ಬಹಿರಂಗಪಡಿಸಿದ್ದು, ರಾಜ್ಯದಲ್ಲಿ ಮತಾಂತರಕ್ಕಾಗಿ ಕ್ರಿಶ್ಚಿಯನ್ ಮಿಷನರಿಗಳು 3 ಲಕ್ಷ ಹಿಂದೂಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದೆ.
ರಾಜಸ್ಥಾನದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಸುಮಾರು 3 ಲಕ್ಷ ಹಿಂದೂಗಳನ್ನು ಮತಾಂತರಿಸುವ ಉದ್ದೇಶದಿಂದ ಸಂಪರ್ಕಿಸಿದ್ದಾರೆ ಎಂದು ‘ಧರ್ಮ ಜಾಗರಣ್ ಮಂಚ್’ ಹೇಳಿಕೊಂಡಿದೆ. ಕ್ರಿಶ್ಚಿಯನ್ ಮಿಷನರಿಗಳು ಮೂರ್ತಿ ಪೂಜೆಯನ್ನು ಟೀಕಿಸುತ್ತಿದ್ದಾರೆ ಮತ್ತು ಹಿಂದೂಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಂಘಟನೆ ಹೇಳಿದೆ.
ಧರ್ಮ ಜಾಗರಣ್ ಮಂಚ್ ಪ್ರಕಾರ, ರಾಜಧಾನಿ ಜೈಪುರದಿಂದ ಕೇವಲ 22 ಕಿಮೀ ದೂರದಲ್ಲಿರುವ ಧನಿ ಭೈರವ, ವಾಟಿಕಾ ಗ್ರಾಮದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ತುಂಬಾ ಸಕ್ರಿಯರಾಗಿದ್ದಾರೆ. ಈ ಜಾಗದಲ್ಲಿ 400 ಹಿಂದೂ ಕುಟುಂಬಗಳನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳು ವಿಗ್ರಹಾರಾಧನೆಯನ್ನು ನಿಲ್ಲಿಸುವಂತೆ, ವಿವಿಧ ಆಚರಣೆಗಳನ್ನು ಅನುಸರಿಸದಂತೆ, ಹಿಂದೂ ದೇವತೆಗಳು ಮತ್ತು ಇತರ ರೀತಿಯ ಆಚರಣೆಗಳನ್ನು ನಂಬದಂತೆ ಹಿಂದೂಗಳಿಗೆ ಸಲಹೆ ನೀಡುತ್ತಿದ್ದಾರೆ ಎಂದು ಸಂಘಟನೆಯು ಹೇಳಿಕೊಂಡಿದೆ.
ಸನಾತನ ಪ್ರಭಾತ್ ವರದಿಗಳ ಪ್ರಕಾರ, ಮಿಷನರಿಗಳು “ಏಸುಕ್ರಿಸ್ತನನ್ನು ಆರಾಧಿಸುವುದರಿಂದ ಅವರ ಎಲ್ಲಾ ಕಾಯಿಲೆಗಳು ಸೇರಿದಂತೆ ಹಿಂದೂಗಳ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ, ಆದರೆ ದೇವತೆಗಳನ್ನು ಪೂಜಿಸುವುದರಿಂದ ಅನಾಹುತಕ್ಕೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ. ನಿವಾಸಿಗಳು ನೀಡಿದ ಮಾಹಿತಿಯ ಪ್ರಕಾರ, ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳಿಗೆ ಉದ್ಯೋಗದ ಭರವಸೆ ನೀಡುತ್ತಿದ್ದು, ನದಿಗಳು ಅಥವಾ ಸರೋವರಗಳಲ್ಲಿ ದೇವತೆಗಳ ವಿಗ್ರಹಗಳನ್ನು ಎಸೆಯಲು ಅಥವಾ ಅಶ್ವಥ ಮರದ ಕೆಳಗೆ ಇಡಲು ಸೂಚಿಸುತ್ತಿದ್ದಾರೆ.
ರಿಪಬ್ಲಿಕ್ ಮಾಧ್ಯಮದ ವರದಿಗಳ ಪ್ರಕಾರ, ಕ್ರಿಶ್ಚಿಯನ್ ಮಿಷನರಿಗಳು ಹಿಂದೂ ವಿರೋಧಿ ಸಂದೇಶಗಳನ್ನು ಪ್ರಚಾರ ಮಾಡುವ ಮೂಲಕ ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜಗಳ ಇತರ ಜನರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗೆ ಮಾಡುವ ಸಲುವಾಗಿ ಹಿಂದೂ ದೇವ-ದೇವತೆಗಳ ವಿರುದ್ಧ ಹಿಂದೂ ದ್ವೇಷವನ್ನು ಬಿಂಬಿಸುವ ಸಂದೇಶಗಳನ್ನು ಪ್ರಚಾರ ಮಾಡಲಾಗುತ್ತಿದೆ.
ಸ್ಥಳೀಯ ನಿವಾಸಿಯೊಬ್ಬರ ಪ್ರಕಾರ, “ಅಕ್ಟೋಬರ್ 28 ರಂದು, ಭಜನಾ ಸಂಧ್ಯಾ ಹೆಸರಿನಲ್ಲಿ ದೊಡ್ಡ ಕಾರ್ಯಕ್ರಮವನ್ನು ನಡೆಸಲಾಯಿತು, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಒಟ್ಟುಗೂಡಿಸಿ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಪ್ರಯತ್ನಗಳು ನಡೆದವು, ನಾವು ಇದನ್ನು ಆಯೋಜಿಸಿದ್ದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಇವತ್ತಿನವರೆಗೂ ಆತವತಲೆಮರೆಸಿಕೊಂಡಿದ್ದು, ಪೊಲೀಸರಿಗೆ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ.ನಮ್ಮ ಗ್ರಾಮದ ಸುಮಾರು 500-600 ಕುಟುಂಬಗಳು ಅವರ ಬಲೆ ಸಿಕ್ಕಿಬಿದ್ದಿದ್ದಾರೆ. ಸಿಂಧೂರ, ಬಿಂದಿಗೆ, ಬಳೆಗಳನ್ನು ಧರಿಸಬೇಡಿ ಎಂದು ಮಹಿಳೆಯರಿಗೆ ಅವರು ಹೇಳುತ್ತಿದ್ದರು. ಪೂಜೆ ಮಾಡಬೇಡಿ ಎಂದು ಜನರನ್ನು ಕೇಳುತ್ತಿದ್ದರು. ಅವರು ಪೂಜೆಯ ಸಮಯದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಲು ಜನರನ್ನು ಪ್ರೋತ್ಸಾಹಿಸುತ್ತಿದ್ದರು” ಎಂದಿದ್ದಾರೆ.
ದೀಪಾವಳಿಯಂದು ನಮ್ಮ ಬಳಿಗೆ ಬಂದು ಯಾವುದೇ ಪೂಜೆ ಮಾಡದಂತೆ ಕೇಳಿಕೊಂಡಿದ್ದಾರೆ ಎಂದು ಮತ್ತೊಬ್ಬರು ಆರೋಪಿಸಿದ್ದಾರೆ.
ಆದರೂ, ರಾಜಸ್ಥಾನದ ಸರ್ಕಾರ ಮಿಷನರಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿ ಅವರ ಕೃತ್ಯವನ್ನು ಬೆಂಬಲಿಸುತ್ತಿದೆ.
#Rajasthan resisted Mughals and conversions, fought off invaders, but our Rajasthan govt has allowed #MassConversions
How will Rajasthanis fight it? pic.twitter.com/TiUYTacaF3— Ratan Sharda 🇮🇳 रतन शारदा (@RatanSharda55) November 8, 2022
#Rajasthan #Jaipur #Conversion #Hindu #Hindus #gurunanakjayanti #LalKrishnaAdvani #LKAdvani
राजस्थान में गरीब हिंदुओं को बरगला कर ईसाई बनाने का खेल खेला जा रहा है। बीमारी ठीक करने का झांसा देकर दलितों का धर्म परिवर्तन किया जा रहा है। ये सब कुछ खुलेआम सरकार के सामने हो रहा है। pic.twitter.com/PamBlXu0cj
— I Oppose Conversion (@IOpposeConvrsn) November 8, 2022
Conspiracy of Christian machinery to convert 3 lakh Hindus in #Rajasthan ❗
Due to the lack of religious education among Hindus,Therefore, it is necessary to give them religious education and to implement the #Anti_Conversion law across the country by the central government ❗ pic.twitter.com/0vJSzN1135
— 🚩Prabhakar Acharya🇮🇳 (@Prabhak41657341) November 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.