ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಮಾಸ್ಕೋ ಮೂಲದ ಚಿಂತಕರ ಚಾವಡಿ ವಾಲ್ಡೈ ಚರ್ಚಾ ಕ್ಲಬ್ಗೆ ತಮ್ಮ ವಾರ್ಷಿಕ ಭಾಷಣ ಮಾಡಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ.
“ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಅವರು ನಿಜವಾದ ದೇಶಭಕ್ತ” ಎಂದಿದ್ದಾರೆ.
“ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಹಳಷ್ಟು ಕಾರ್ಯ ಮಾಡಲಾಗಿದೆ. ಅವರು ತಮ್ಮ ದೇಶದ ದೇಶಭಕ್ತರಾಗಿದ್ದಾರೆ. ಅವರ ‘ಮೇಕ್ ಇನ್ ಇಂಡಿಯಾ’ ಕಲ್ಪನೆಯು ಆರ್ಥಿಕವಾಗಿ ಮತ್ತು ನೈತಿಕವಾಗಿ ಮುಖ್ಯವಾಗಿದೆ. ಭವಿಷ್ಯವು ಭಾರತಕ್ಕೆ ಸೇರಿದ್ದು, ಅದು ಹೆಮ್ಮೆಪಡಬಹುದಾದ ಸಂಗತಿ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ” ಎಂದು ಕ್ರೆಮ್ಲಿನ್ ವಾಲ್ಡೈ ಡಿಸ್ಕಷನ್ ಕ್ಲಬ್ನಲ್ಲಿ ಪುಟಿನ್ ಹೇಳಿದ್ದಾರೆ.
ಭಾರತದ ಬೆಳವಣಿಗೆಯನ್ನು ಬ್ರಿಟಿಷ್ ವಸಾಹತುವಿನಿಂದ ಆಧುನಿಕ ರಾಷ್ಟ್ರದತ್ತ ಪ್ರಚಂಡವಾದ ಹೆಜ್ಜೆ ಎಂದು ಕರೆದ ರಷ್ಯಾದ ಅಧ್ಯಕ್ಷರು, ಸುಮಾರು 1.5 ಶತಕೋಟಿ ಜನರು ಮತ್ತು ಖಚಿತವಾದ ಅಭಿವೃದ್ಧಿ ಫಲಿತಾಂಶಗಳು ಭಾರತದ ಬಗ್ಗೆ ಪ್ರತಿಯೊಬ್ಬರ ಗೌರವ ಮತ್ತು ಮೆಚ್ಚುಗೆಗೆ ಕಾರಣಗಳನ್ನು ನೀಡುತ್ತವೆ ಎಂದು ಹೇಳಿದರು.
ಅವರು ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಒತ್ತಿಹೇಳಿದರು, ಇದನ್ನು ವಿಶೇಷ ಸಂಬಂಧ ಎಂದು ಕರೆದರು.
“ಭಾರತ-ರಷ್ಯಾ ಸ್ನೇಹ ಹಲವು ದಶಕಗಳ ನಿಕಟ ಮಿತ್ರ ಸಂಬಂಧದಿಂದ ಆಧಾರವಾಗಿದೆ. ನಾವು ಎಂದಿಗೂ ಯಾವುದೇ ಕಷ್ಟಕರ ಸಮಸ್ಯೆಗಳನ್ನು ಸಂಬಂಧದಲ್ಲಿ ಎದುರಿಸಿಲ್ಲ ಮತ್ತು ಪರಸ್ಪರ ಬೆಂಬಲಿಸಿದ್ದೇವೆ ಮತ್ತು ಈಗಲೂ ಅದು ನಡೆಯುತ್ತಿದೆ. ಇದು ಭವಿಷ್ಯದಲ್ಲೂ ಸಂಭವಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಪುಟಿನ್ ಹೇಳಿದ್ದಾರೆ.
ಭಾರತದ ಕೃಷಿಗೆ ಬಹಳ ಮುಖ್ಯವಾದ ರಸಗೊಬ್ಬರಗಳ ಪೂರೈಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ ಎಂದು ಪುಟಿನ್ ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.