News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ಶಾಂತಿಯನ್ನು ನಂಬುತ್ತದೆ: ಮೋದಿ

ಕಾರ್ಗಿಲ್: ಭಾರತ ಯಾವಾಗಲೂ ಯುದ್ಧವನ್ನು ಕೊನೆಯ ಉಪಾಯವೆಂದು ಪರಿಗಣಿಸಿದೆ ಮತ್ತು ಶಾಂತಿಯನ್ನು ನಂಬುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.‌

ದೀಪಾವಳಿಯ ಸಂದರ್ಭದಲ್ಲಿ ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತ ಎಂದಿಗೂ ಯುದ್ಧವನ್ನು ಮೊದಲ ಆಯ್ಕೆಯಾಗಿ ನೋಡಿಲ್ಲ, ಆದರೆ ಶಕ್ತಿಯಿಲ್ಲದೆ ಶಾಂತಿಯನ್ನು ಸಾಧಿಸಲು ಸಾಧ್ಯವಿಲ್ಲ. ರಾಷ್ಟ್ರದ ಮೇಲೆ ಕೆಟ್ಟ ದೃಷ್ಟಿ ಬೀರುವ ಯಾರಿಗಾದರೂ ತಕ್ಕ ಉತ್ತರ ನೀಡುವ ಶಕ್ತಿ ಮತ್ತು ಕಾರ್ಯತಂತ್ರಗಳನ್ನು ನಮ್ಮ ಸಶಸ್ತ್ರ ಪಡೆ ಹೊಂದಿದೆ ಎಂದು ಅವರು ಹೇಳಿದರು.

1999 ರಲ್ಲಿ ಕಾರ್ಗಿಲ್ ಸಂಘರ್ಷದ ನಂತರ ಭಾರತೀಯ ಸೇನೆಯು ಭಯೋತ್ಪಾದನೆಯ ಹುನ್ನಾರವನ್ನು ಹತ್ತಿಕ್ಕಿದಾಗ’ ಈ ಗಡಿನಾಡು ಪ್ರದೇಶಕ್ಕೆ ತಾವು ಭೇಟಿ ನೀಡಿದ್ದನ್ನು ಪ್ರಧಾನಿ ಸ್ಮರಿಸಿದರು.

ವಿಶ್ವ ಇತಿಹಾಸದಲ್ಲಿ ನಾಗರೀಕತೆಗಳು ಹುಟ್ಟಿಕೊಂಡಿವೆ ಮತ್ತು ನಾಶವಾಗಿವೆ, ಆದರೆ ಭಾರತವು ಸಾಧ್ಯವಿರುವ ಎಲ್ಲ ಸವಾಲುಗಳಿಂದ ಮೇಲೇರಿದೆ.  ಒಂದು ದೇಶದ ವೀರ ಸೈನಿಕರು ಅಪಾರವಾದ ನಂಬಿಕೆ ಇಟ್ಟಾಗ ರಾಷ್ಟ್ರ ಅಮರವಾಗುತ್ತದೆ ಎಂದರು.

ಕಳೆದ ಎಂಟು ವರ್ಷಗಳಲ್ಲಿ, ಹೊಸ ತಂತ್ರಜ್ಞಾನಗಳನ್ನು ನಿಯೋಜಿಸುವ ಮೂಲಕ, ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ಪಡೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ತೆರೆಯುವ ಮೂಲಕ ಸಶಸ್ತ್ರ ಪಡೆಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರವು ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದರು.

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸೇರ್ಪಡೆ ನಮ್ಮ ಬಲವನ್ನು ಹೆಚ್ಚಿಸುತ್ತಿದೆ.ಗಡಿಗಳು ಸುರಕ್ಷಿತವಾಗಿದ್ದಾಗ, ಆರ್ಥಿಕತೆಯು ಬಲವಾಗಿದ್ದಾಗ ಮತ್ತು ಸಮಾಜವು ಪೂರ್ಣವಾಗಿದ್ದಾಗ ದೇಶವು ಸುರಕ್ಷಿತವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು

‘ಆತ್ಮನಿರ್ಭರ ಭಾರತ್’ ರಾಷ್ಟ್ರದ ಭದ್ರತೆಗೆ ಅತ್ಯಂತ ಪ್ರಮುಖವಾದುದು ಮತ್ತು ವಿದೇಶಿ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳ ಮೇಲೆ ದೇಶದ ಅವಲಂಬನೆಯು ಕನಿಷ್ಠವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಮೋದಿ ದೀಪಾವಳಿಯನ್ನು ಆಚರಿಸಲು ವಿವಿಧ ಮಿಲಿಟರಿ ಸೌಲಭ್ಯಗಳಿಗೆ ಭೇಟಿ ನೀಡುತ್ತಲೇ ಬಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top