ನವದೆಹಲಿ: ಇನ್ನು ಎರಡು ತಿಂಗಳಲ್ಲಿ ಅಯೋಧ್ಯೆಯ ಪವಿತ್ರ ಸರಯು ದಡದಲ್ಲಿ ದೀಪೋತ್ಸವ ನಡೆಯಲಿದೆ. ಈ ಬಾರಿ 14 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಾಣ ಮಾಡುವ ಗುರಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಇಟ್ಟುಕೊಂಡಿದೆ.
ಹೀಗಾಗಿ ಬೆಳಗಿಸುವ 14 ಲಕ್ಷ ಮಣ್ಣಿನ ದೀಪಗಳ ಬೇಡಿಕೆಯನ್ನು ಪೂರೈಸಲು ಅಯೋಧ್ಯೆ ನಗರದ ಸುತ್ತಲಿನ ಹಳ್ಳಿಗಳಲ್ಲಿನ ಕುಂಬಾರರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.
ದೀಪಾವಳಿಯ ಒಂದು ದಿನ ಮುಂಚಿತವಾಗಿ ಸರ್ಕಾರವು ‘ದೀಪೋತ್ಸವ’ವನ್ನು ಆಯೋಜಿಸುತ್ತಿದೆ. ಇದರಡಿ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂಸೇವಕರು ಅಯೋಧ್ಯೆಯ ನದಿಯ ದಡದ ಉದ್ದಕ್ಕೂ ದೀಪಗಳನ್ನು ಸಾಲಾಗಿ ಇಡಲಿದ್ದಾರೆ. ಮುಸ್ಸಂಜೆಯಲ್ಲಿ ದೀಪಗಳು ಬೆಳಗಳಿವೆ.
ಯೋಗಿ ಆದಿತ್ಯನಾಥ್ ಸರ್ಕಾರ ಬಂದ ಬಳಿಕ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಪ್ರದಾಯ ಪ್ರಾರಂಭವಾಯಿತು. 2017 ರಲ್ಲಿ 51,000 ದೀಪಗಳೊಂದಿಗೆ ಪ್ರಾರಂಭವಾಗಿ, ಈ ಸಂಖ್ಯೆ 2019 ರಲ್ಲಿ 4.10 ಲಕ್ಷಕ್ಕೆ ಏರಿತು, 2020 ರಲ್ಲಿ 6 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಲಾಯಿತು ಮತ್ತು ಕಳೆದ ವರ್ಷ 9 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲಾಯಿತು.
ಈ ಬಾರಿ ಅಕ್ಟೋಬರ್ 23 ರಂದು 14 ಲಕ್ಷ ಹಣತೆಗಳನ್ನು ಬೆಳಗಿಸುವ ಸಾಧ್ಯತೆ ಇದೆ ಎಂದು ಸಂಘಟಕರು ಹೇಳಿದ್ದಾರೆ.
ಈಗಾಗಲೇ, ಜೈಸಿಂಗ್ಪುರ ಗ್ರಾಮದಲ್ಲಿ ಕುಂಬಾರರು ದೊಡ್ಡ ಆರ್ಡರ್ಗಳ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರಲ್ಲಿ 26 ವರ್ಷದ ರಾಜು ಕೂಡ ಒಬ್ಬರು. ಕಳೆದ ವರ್ಷ, ಅವರು ಮತ್ತು ಅವರೊಂದಿಗೆ ಕೆಲಸ ಮಾಡುವವರು ಕೇವಲ 15-20 ದಿನಗಳ ಮುಂಚಿತವಾಗಿ ಆರ್ಡರ್ ಪಡೆದು ದೀಪೋತ್ಸವಕ್ಕೆ 21,000 ಹಣತೆಗಳನ್ನು ತಲುಪಿಸಿದ್ದರು.
”ಈ ಬಾರಿ ನಾನು ಅವಕಾಶ ಕೈಚೆಲ್ಲಲು ಬಯಸುವುದಿಲ್ಲ. ಆದ್ದರಿಂದ ನಾವು ಹಣತೆಗಳನ್ನು ತಯಾರಿಸುವ ಮತ್ತು ಸಂಗ್ರಹಿಸುವ ಕೆಲಸದಲ್ಲಿದ್ದೇವೆ. ಈ ಬಾರಿ 40-50,000 ಹಣತೆಗಳನ್ನು ತಲುಪಿಸುವ ನಿರೀಕ್ಷೆಯಿದೆ,” ಎಂದು ಹೇಳಿದ್ದಾರೆ. ಇತರರಂತೆ, ಅವರು ಉತ್ತಮ ಬೆಲೆಯನ್ನು ಕೂಡ ನಿರೀಕ್ಷಿಸುತ್ತಿದ್ದಾರೆ.
”ಕಳೆದ ವರ್ಷ ನಾವು ಪ್ರತಿ ಹಣತೆಗೆ ಒಂದು ರೂಪಾಯಿ ಪಡೆದಿದ್ದೇವೆ. ಆದರೆ ಈ ಬಾರಿ ಬೆಲೆಯೂ ಏರಿಕೆಯಾಗಿರುವುದರಿಂದ ಒಂದು ಹಣತೆಗೆ ಕನಿಷ್ಠ 1.50 ರೂಪಾಯಿ ಸಿಗಬೇಕು ಎಂದು ನಾನು ಭಾವಿಸುತ್ತೇನೆ. ಎಲ್ಲವೂ ದುಬಾರಿಯಾಗಿದೆ, ನಮ್ಮ ಹಣತೆಗಳೂ ಸಹ ದುಬಾರಿಯಾಗಬೇಕು” ಎಂದಿದ್ದಾರೆ.
ಸುಮಾರು 40 ಕುಂಬಾರ ಕುಟುಂಬಗಳನ್ನು ಹೊಂದಿರುವ ಜೈಸಿಂಗ್ಪುರ ಗ್ರಾಮವು ಕಳೆದ ವರ್ಷ ಐದು ಅಥವಾ ಆರು ಲಕ್ಷ ಹಣತೆಗಳನ್ನು ಪೂರೈಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.