ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ), ಸೆಪ್ಟೆಂಬರ್ 10 ರಂದು ದೇರಳಕಟ್ಟೆಯ ಪಾನಿರಿನ ಕಾಲೇಜು ಸಭಾಂಗಣದಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಬೆಳಗ್ಗೆ 10-30 ಕ್ಕೆ ಏರ್ಪಡಿಸಿದ್ದಾರೆ.
ಖ್ಯಾತ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಕ ಶ್ರೀ ನಿರೇನ್ ಜೈನ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಪರಿಸರ ಸಂರಕ್ಷಣೆ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ‘ನೀ-ಇಕೋ’ ಎಂಬ ವಿದ್ಯಾರ್ಥಿ ಪರಿಸರ ಸಂಘವನ್ನು ಕೂಡ ಉದ್ಘಾಟಿಸಲಿದ್ದಾರೆ.
‘ನೀ-ಇಕೋ’ ಸಂಘವು ಪರಿಸರಕ್ಕೆ ಸಂಭದಪಟ್ಟ ವಿವಿಧ ವಿಷಯಗಳಲ್ಲದೆ ಇತರ ವಿಷಯಗಳಾದ, ‘ಹಸಿರು ಉಳಿಸಿ’, ‘ಪ್ಲಾಸ್ಟಿಕ್ ಮುಕ್ತ ಪರಿಸರದ’ ಬಗ್ಗೆ ಜಾಗ್ರಿತಿಯನ್ನು ಸಿನಿಮಾ, ವಿಚಾರ ಸಂಕೀರ್ಣ ಹಾಗೂ ಜನಸಮೂಹ ಕಾರ್ಯಕ್ರಮದ ಮುಖಾಂತರ ನೀಡಲಾಗುವುದು.
ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಶ್ರೀ ರವಿರಾಜ್ ಕಿಣಿ, ಸಂಘದ ಸಿಬ್ಬಂದಿ ಸಂಯೋಜಕಿ ಕು. ಅನೀಷಾ ಹಾಗೂ ವಿದ್ಯಾರ್ಥಿ ಸಂಯೋಜಕಿ ಕು. ಆಷಿಕ ಅಪ್ಪಯ್ಯ ಈ ಸಂದರ್ಭದಲ್ಲಿ ಉಪಸ್ಥಿತಲಿರುವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.