ನವದೆಹಲಿ: ಕಾರ್ಯಾಚರಣಾ ಸಿದ್ಧತೆಗಳನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ನಿರ್ಣಾಯಕ ಶಸ್ತ್ರಾಸ್ತ್ರಗಳನ್ನು ತುರ್ತು ಸ್ವಾಧೀನ ಅಧಿಕಾರದಡಿಯಲ್ಲಿ ಖರೀದಿ ಮಾಡಲು ರಕ್ಷಣಾ ಪಡೆಗಳಿಗೆ ಮತ್ತಷ್ಟು ಅಧಿಕಾರವನ್ನು ನೀಡಲು ಮುಂದಾಗಿದೆ.
ಇದರಿಂದಾಗಿ ಫಾಸ್ಟ್ ಟ್ರ್ಯಾಕ್ ಮಾರ್ಗದ ಮೂಲಕ ನಿರ್ಣಾಯಕ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲು ರಕ್ಷಣಾ ಪಡೆಗಳಿಗೆ ಅವಕಾಶ ಸಿಗಲಿದೆ.
ಇಂತಹ ಅಧಿಕಾರವನ್ನು 2016ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಉರಿ ಸರ್ಜಿಕಲ್ ಸ್ಟ್ರೈಕ್ ಬಳಿಕ ರಕ್ಷಣಾ ಪಡೆಗಳಿಗೆ ಒದಗಿಸಲಾಗಿತ್ತು. ಇದು 2020 ರ ಮೇ ತಿಂಗಳಿನಿಂದ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೂಡ ಸಹಕಾರಿಯಾಗಿದೆ.
ರಕ್ಷಣಾ ಪಡೆಗಳಿಗೆ ತುರ್ತು ಸ್ವಾಧೀನ ಅಧಿಕಾರವನ್ನು ನೀಡುವ ಬಗೆಗೆ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ. ಈ ಸಭೆ ಮುಂದಿನ ವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ತುರ್ತು ಅಧಿಕಾರವು ರಕ್ಷಣಾ ಪಡೆಗಳಿಗೆ ಹೊಸ ಮತ್ತು ಇನ್ ಸರ್ವಿಸ್ ಪರಿಕರಗಳನ್ನು ಫಾಸ್ಟ್ ಟ್ರ್ಯಾಕ್ ಆಧಾರದಲ್ಲಿ ಖರೀದಿಸಿ ಸಂಘರ್ಷದ ಸನ್ನಿವೇಶಗಳಲ್ಲಿ ಸಿದ್ಧತೆಗಳನ್ನು ಸುಧಾರಿಸಲು ಅವಕಾಶ ನೀಡಲಿದೆ.
ಹಿಂದಿನ ಅನುಮೋದನೆಯಲ್ಲಿ ರಕ್ಷಣಾ ಪಡೆಗಳಿಗೆ ರೂ.300 ಕೋಟಿ ರೂಪಾಯಿಗಳ ಪರಿಕರಗಳನ್ನು ತುರ್ತು ಅಧಿಕಾರದಡಿ ಖರೀದಿಸುವ ಅವಕಾಶ ನೀಡಲಾಗಿತ್ತು. ಮೂರರಿಂದ ಒಂದು ವರ್ಷದೊಳಗೆ ಶಸ್ತ್ರಾಸ್ತ್ರಗಳ ವಿತರಣೆ ನಡೆಯುತ್ತಿತ್ತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.