ನವದೆಹಲಿ: ಭಾರತವು ಸಹಿಷ್ಣುತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಕಾನೂನು ಚೌಕಟ್ಟಿನೊಳಗೆ ಯಾವುದೇ ವಿಧ್ವಂಸಕತೆಯನ್ನು ಪರಿಣಾಕಾರಿಯಾಗಿ ಎದುರಿಸುತ್ತದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.
ನೂಪುರ್ ಶರ್ಮಾ ಅವರು ಇಸ್ಲಾಂ ಪ್ರವಾದಿಯ ಬಗ್ಗೆ ನೀಡಿದ ಹೇಳಿಕೆಗೆ ಮುಸ್ಲಿಂ ದೇಶಗಳಲ್ಲಿ ಹೊರಹೊಮ್ಮುತ್ತಿರುವ ಆಕ್ರೋಶಕ್ಕೆ ಸಂಬಂಧಿಸಿದಂತೆ ಭಾರತ ಈ ಹೇಳಿಕೆ ನೀಡಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಅವರು, ದೇಶಕ್ಕೆ ಹೊರಗಿನವರಿಂದ ಆಯ್ದ ಆಕ್ರೋಶ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
“ಭಾರತದ ಬಹುಸಂಸ್ಕೃತಿಯ ನೆಲ ಶತಮಾನಗಳಿಂದ ಎಲ್ಲರಿಗೂ ಸುರಕ್ಷಿತ ಸ್ವರ್ಗವಾಗಿದೆ. ಯಹೂದಿ ಸಮುದಾಯ ಅಥವಾ ಜೊರಾಸ್ಟ್ರಿಯನ್ನರು ಅಥವಾ ಟಿಬೆಟಿಯನ್ನರು ಅಥವಾ ನಮ್ಮ ಸ್ವಂತ ನೆರೆಹೊರೆಯವರು ಕೂಡ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
“ನಮ್ಮ ರಾಷ್ಟ್ರದ ಈ ಆಧಾರವಾಗಿರುವ ಶಕ್ತಿಯೇ ಮೂಲಭೂತೀಕರಣ ಮತ್ತು ಭಯೋತ್ಪಾದನೆಯನ್ನು ತಡೆದುಕೊಂಡಿದೆ” ಎಂದು ಅವರು ಹೇಳಿದರು.
“ನಾವು ಮತ್ತೆ ಮತ್ತೆ ಒತ್ತಿಹೇಳುತ್ತೇವೆ, ಧಾರ್ಮಿಕ ಫೋಬಿಯಾವನ್ನು ಎದುರಿಸುವುದು ಕೇವಲ ಒಂದು ಅಥವಾ ಎರಡು ಧರ್ಮಗಳನ್ನು ಒಳಗೊಂಡ ಆಯ್ದ ಕಾರ್ಯ ಆಗಬಾರದು. ಅದನ್ನು ಅಬ್ರಹಾಮಿಕ್ ಅಲ್ಲದ ಧರ್ಮಗಳ ವಿರುದ್ಧದ ಫೋಬಿಯಾಗಳಿಗೂ ಸಮಾನವಾಗಿ ಅನ್ವಯಿಸಬೇಕು. ಹೀಗಾಗದ ಹೊರತು ಅಂತರರಾಷ್ಟ್ರೀಯ ದಿನಗಳು ಎಂದಿಗೂ ತಮ್ಮ ಉದ್ದೇಶಗಳನ್ನು ಸಾಧಿಸುವುದಿಲ್ಲ. ಧರ್ಮಾಂಧತೆಯ ಮೇಲೆ ಎರಡು ಮಾನದಂಡಗಳು ಇರಬಾರದು” ಎಂದಿದ್ದಾರೆ.
“ವಿಧ್ವಂಸಕತೆಯನ್ನು ನಮ್ಮ ಕಾನೂನು ಚೌಕಟ್ಟಿನೊಳಗೆ ವ್ಯವಹರಿಸಲಾಗುತ್ತದೆ ಮತ್ತು ಹೊರಗಿನವರಿಂದ ಆಯ್ದ ಆಕ್ರೋಶ ನಮಗೆ ಅಗತ್ಯವಿಲ್ಲ, ವಿಶೇಷವಾಗಿ ಕೋಮುವಾದ ಸ್ವಭಾವವನ್ನು ಹೊಂದಿರುವವರಿಂದ ಮತ್ತು ವಿಭಜಕ ಕಾರ್ಯಸೂಚಿಯನ್ನು ಅನುಸರಿಸುವವರಿಂದ ಭಾರತಕ್ಕೆ ಪಾಠದ ಅಗತ್ಯವಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.