ಲಕ್ನೋ: ಕಾಶಿ ವಿಶ್ವನಾಥ ದೇಗುಲಕ್ಕೆ ಹೂಗಳನ್ನು ನೀಡುತ್ತಿದ್ದ ‘ಬಾಬಾ ಕಿ ಬಗಿಯಾ’ ಎಂಬ ಉದ್ಯಾನವನವನ್ನು ಉತ್ತರಪ್ರದೇಶ ಸರ್ಕಾರ ಅತಿಕ್ರಮಣದಿಂದ ಮುಕ್ತಗೊಳಿಸಿದೆ. ಈ ಮೂಲಕ ಈ ಉದ್ಯಾನವನ ಮತ್ತೆ ಕಾಶಿ ವಿಶ್ವನಾಥನಿಗೆ ಹೂಗಳನ್ನು ನೀಡಲಿದೆ.
62 ಸಾವಿರ ಚದರ ಅಡಿಯ 300 ಕೋಟಿ ರೂಪಾಯಿ ಬೆಲೆ ಬಾಳುವ ಈ ಉದ್ಯಾನವನ 2003ರಿಂದ ಇಬ್ಬರು ಮಾಫಿಯಾ ಸಹೋದರರ ಅಕ್ರಮ ವಶದಲ್ಲಿತ್ತು. ಗೋಡೆ ನಿರ್ಮಾಣ ಮಾಡುವ ಮೂಲಕ ಮಾಫಿಯಾದವರು ಈ ಉದ್ಯಾನವನವನ್ನು ಅತಿಕ್ರಮಣ ಮಾಡಿದ್ದರು.
ತಮಿಳುನಾಡು ಮೂಲದ ಸಂಘಟನೆಯ ಮಾಲೀಕತ್ವ ಹೊಂದಿರುವ ಈ ಉದ್ಯಾನವನದ ಭೂಮಿಯನ್ನು ಮಾಫಿಯಾ ವಶಪಡಿಸಿಕೊಂಡಿತ್ತು ಮತ್ತು ಇತರರಿಗೆ ಬಾಡಿಗೆಗೆ ನೀಡುತ್ತಿತ್ತು. ವಾಣಿಜ್ಯ ಉದ್ದೇಶಕ್ಕಾಗಿ ಈ ಭೂಮಿಯನ್ನು ಬಳಕೆ ಮಾಡುತ್ತಿದ್ದವರ ಕೈಯಿಂದ ವಾರಣಾಸಿ ಪೊಲೀಸ್ ಕಮಿಷನರೇಟ್ ಇದನ್ನು ವಾಪಸ್ ಪಡೆದುಕೊಂಡಿದೆ.
ತಮಿಳುನಾಡು ಮೂಲದ ಶ್ರೀಕಾಶಿ ನಟ್ಟುಕ್ಕೊಟ್ಟಯ್ ನಗರ ಸತ್ರಂ ಈ ಉದ್ಯಾನವನದ ಮಾಲೀಕತ್ವವನ್ನು ಹೊಂದಿದ್ದು, ಕಾಶಿ ವಿಶ್ವನಾಥನಿಗೆ ‘ಭೋಗ್ ಪ್ರಸಾದ’ ಸಿದ್ಧಪಡಿಸಲು 209 ವರ್ಷಗಳಿಂದ ಈ ಉದ್ಯಾನವನವನ್ನು ಬಳಸುತ್ತಿತ್ತು. ದೇವರಿಗೆ ನಿತ್ಯಪೂಜೆಗೆ ಇಲ್ಲಿ ಹೂಗಳನ್ನು ಬೆಳೆಯಲಾಗುತ್ತಿತ್ತು.
ಇದೀಗ ಈ ಭೂಮಿಯನ್ನು ಅತಿಕ್ರಮಣದಿಂದ ಸ್ವತಂತ್ರ ಗೊಳಿಸಲಾಗಿದ್ದು, ಮತ್ತೆ ಇಲ್ಲಿ ಕಾಶಿ ವಿಶ್ವನಾಥನಿಗಾಗಿ ಹೂಗಳು ಅರಳಿ ನಿಲ್ಲಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.