ಚೆನ್ನೈ: ಶ್ರೀಲಂಕಾಕ್ಕೆ ತಮಿಳುನಾಡು ಸರ್ಕಾರ ಘೋಷಿಸಿದಂತೆ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಹಡಗು ನಿನ್ನೆ ಹೊರಟಿದೆ. ಇದಕ್ಕೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಚಾಲನೆ ನೀಡಿದರು.
ರವಾನಿಸಲಾದ ಪರಿಹಾರ ಸಾಮಗ್ರಿಗಳಲ್ಲಿ ಒಂಬತ್ತು ಸಾವಿರ ಟನ್ ಅಕ್ಕಿ, 200 ಟನ್ ಹಾಲಿನ ಪುಡಿ ಮತ್ತು 24 ಮೆಟ್ರಿಕ್ ಟನ್ ಅಗತ್ಯ ಔಷಧಗಳು ಸೇರಿವೆ. ಆರ್ಥಿಕ ಒತ್ತಡದಲ್ಲಿ ತತ್ತರಿಸುತ್ತಿರುವ ನೆರೆಯ ರಾಷ್ಟ್ರದ ಸಾರ್ವಜನಿಕರಿಗೆ ಸಹಾಯ ಮಾಡಲು ಇವುಗಳನ್ನು ಕಳುಹಿಸಲಾಗುತ್ತಿದೆ.
ವರದಿಯ ಪ್ರಕಾರ, ಕೊಲಂಬೊಗೆ ತೆರಳುತ್ತಿರುವ ಪರಿಹಾರ ಸಾಮಗ್ರಿಗಳು ತಮಿಳುನಾಡು ಸರ್ಕಾರವು ಶ್ರೀಲಂಕಾಗೆ ಕಳುಹಿಸಿಕೊಡಲು ನಿರ್ಧರಿಸಿರುವ 40 ಸಾವಿರ ಮೆಟ್ರಿಕ್ ಟನ್ ಅಕ್ಕಿ, 500 ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು ಜೀವರಕ್ಷಕಗಳ ಮೊದಲ ಭಾಗವಾಗಿದೆ.
ತಮಿಳುನಾಡು ಆಡಳಿತ ಈ ಉದಾತ್ತ ಉದ್ದೇಶಕ್ಕಾಗಿ ಸಿದ್ಧರಿರುವ ಸಾರ್ವಜನಿಕರಿಂದ ಕೊಡುಗೆಗಳನ್ನು ಪಡೆಯುತ್ತಿದೆ.
ರಾಜ್ಯ ಮತ್ತು ಕೇಂದ್ರದ ನಡುವಿನ ನಿಕಟ ಸಮನ್ವಯದೊಂದಿಗೆ ಮೊದಲ ಬ್ಯಾಚ್ ರವಾನೆ ಆಹಾರ ಸಾಮಾಗ್ರಿ ರವಾನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.