ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಡೆನ್ಮಾರ್ಕ್ನಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ್ದು, ಅವರಿಗೆ ಕನಿಷ್ಠ ಐದು ಭಾರತೀಯರಲ್ಲದ ಸ್ನೇಹಿತರನ್ನು ಭಾರತಕ್ಕೆ ಭೇಟಿ ನೀಡಲು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದಾರೆ.
ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಮತ್ತು ವ್ಯಾಪಾರಸ್ಥರನ್ನು ಒಳಗೊಂಡ ಡೆನ್ಮಾರ್ಕ್ನಲ್ಲಿರುವ ಭಾರತೀಯ ಸಮುದಾಯದ 1,000 ಕ್ಕೂ ಹೆಚ್ಚು ಸದಸ್ಯರು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಭಾರತದ ರಾಯಭಾರಿಗಳು ಎಂದು ಬಣ್ಣಿಸಿದ್ದಾರೆ.
“ನಾವು ನಮ್ಮ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ನಿಮ್ಮ ಪ್ರಯತ್ನದಿಂದ, ನಿಮ್ಮ ಐದು ಭಾರತೀಯರಲ್ಲದ ಸ್ನೇಹಿತರಿಗೆ ನಮ್ಮ ದೇಶಕ್ಕೆ ಭೇಟಿ ನೀಡಲು ಮತ್ತು ಭಾರತವನ್ನು ಅನ್ವೇಷಿಸಲು ನೀವು ಸಹಾಯ ಮಾಡಿದರೆ, ಕೆಲವೇ ವರ್ಷಗಳಲ್ಲಿ ಪ್ರವಾಸಕ್ಕಿರುವುದು ಒಂದೇ ಒಂದು ತಾಣ ಅದುವೇ ‘ಚಲೋ ಇಂಡಿಯಾ’ ಎಂದಾಗುತ್ತದೆ” ಎಂದು ಅವರು ಹೇಳಿದರು.
ಕೋಪನ್ ಹೇಗನ್ನ ಬೆಲ್ಲಾ ಸೆಂಟರ್ನಲ್ಲಿ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ಭಾರತೀಯ ವಲಸಿಗರೊಂದಿಗೆ ಮೋದಿಯವರ ಸಂವಾದದಲ್ಲಿ ಪಾಲ್ಗೊಂಡರು ಮತ್ತು ಮೋದಿಯನ್ನು ತನ್ನ ಸ್ನೇಹಿತ ಎಂದು ಸಭಿಕರಿಗೆ ಪರಚಯಿಸಿದರು.
ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಗ್ಲಾಸ್ಗೋದಲ್ಲಿ ನಡೆದ COP-26 ಹವಾಮಾನ ಶೃಂಗಸಭೆಯಲ್ಲಿ ಭಾರತವು ಮಾಡಿದ ಬದ್ಧತೆಗಳ ಬಗ್ಗೆ ಪ್ರಧಾನಮಂತ್ರಿಯವರು ಇಲ್ಲಿ ಮಾತನಾಡಿದರು.
ಹವಾಮಾನ ಕ್ರಮದ ಕುರಿತು, 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ ಮತ್ತು ತಮ್ಮ ಹವಾಮಾನ ಗುರಿಗಳನ್ನು ತಲುಪಿಸಲು ಸಮರ್ಥವಾಗಿರುವ ಕೆಲವೇ ದೇಶಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದರು.
आप सबसे मेरा एक आग्रह है… pic.twitter.com/gEoGx4YwYC
— Narendra Modi (@narendramodi) May 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.