ಗುವಾಹಟಿ : ವಿಶ್ವದ ಅತ್ಯಂತ ಕಿರಿಯ ರಾಷ್ಟ್ರವಾದ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ವಿಶ್ವ ವೇದಿಕೆಗೆ ಬರಲು ಭಾರತಕ್ಕೆ ಸಮಯ ಬಂದಿದೆ ಎಂದು ಖ್ಯಾತ ಕಾರ್ಯತಂತ್ರ ವ್ಯವಹಾರಗಳ ತಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸಲಹೆಗಾರ ದೀಪಕ್ ವೋಹ್ರಾ ಅವರು ಹೇಳಿದ್ದಾರೆ.
ಗುವಾಹಟಿಯ ರಾಯಲ್ ಗ್ಲೋಬಲ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಿದ ವೋಹ್ರಾ, ಭಾರತಕ್ಕೆ ಜಗತ್ತಿನ ಅಗತ್ಯ ಇರುವುದಕ್ಕಿಂತ ಹೆಚ್ಚಾಗಿ ಜಗತ್ತಿಗೆ ಭಾರತದ ಅಗತ್ಯ ಇದೆ ಎಂದು ಹೇಳಿದ್ದಾರೆ.
ಮಾನವಕುಲವು ಇಂದು ಎದುರಿಸುತ್ತಿರುವ ಆರೋಗ್ಯ, ಹವಾಮಾನ ಅಸ್ಥಿರತೆ ಮತ್ತು ಆರ್ಥಿಕ ಚೇತರಿಕೆಯ ಪ್ರಾಥಮಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಜಗತ್ತಿಗೆ ನಾಯಕತ್ವವನ್ನು ನೀಡಲು ಸಿದ್ಧವಾಗಿದೆ ಎಂದಿದ್ದಾರೆ.
“ಭೌಗೋಳಿಕ ರಾಜಕೀಯ ಮತ್ತು ಭೂ ಅರ್ಥಶಾಸ್ತ್ರದಲ್ಲಿನ ಬದಲಾವಣೆಯ ವೇಗವು ಕಳೆದ ನೂರು ವರ್ಷಗಳಲ್ಲಿ ಇಂದು ಅತ್ಯಂತ ವೇಗವಾಗಿದೆ. ಚೀನಾ ಕನಸು ಕಳೆಗುಂದಿದೆ ಮತ್ತು ಜಾಗತಿಕ ಅಭಿವೃದ್ಧಿ ಪಾಲುದಾರನಾಗಿರದೆ, ಚೀನಾ ಈಗ ಸಾರ್ವತ್ರಿಕ ಬೆದರಿಕೆ’ಯಾಗಿದೆ. ಭಾರತದ ನೆರೆಹೊರೆಯವರೂ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಈ ಬೆದರಿಕೆಯಿಂದ ಎಚ್ಚೆತ್ತುಕೊಂಡಿವೆ, ಆಪತ್ತಿನಿಂದ ಹೊರಬರಲು ಅವು ಭಾರತದತ್ತ ನೋಡುತ್ತಿವೆ”ಎಂದು ಅವರು ಹೇಳಿದರು.
“ಸಾಂಕ್ರಾಮಿಕ ನಮ್ಮನ್ನು ಅಪ್ಪಳಿಸಿದಾಗ ನಾವು ಎಡವಿ ಬಿದ್ದೆವು, ಆದರೆ ನಾವು ಎದ್ದುನಿಂತು ಅದನ್ನು ಯಶಸ್ವಿಯಾಗಿ ನಿಭಾಯಿಸಿದೆವು” ಎಂದು ವೋಹ್ರಾ ಹೇಳಿದ್ದಾರೆ.
ಕೊರೊನಾವೈರಸ್ನಿಂದ ಉಂಟಾದ ಬೃಹತ್ ಆರೋಗ್ಯ ಬಿಕ್ಕಟ್ಟನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿದೆ ಮತ್ತು ಆರೋಗ್ಯದ ಹೈಪರ್ ಪವರ್ ಆಗಿ ಭಾರತ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.
“ಲಸಿಕೆ, ಹಸಿರು ಶಕ್ತಿ ಸೇರಿದಂತೆ ಎಲ್ಲಾ ಮಹತ್ವಾಕಾಂಕ್ಷೆಯ ಗುರಿಗಳನ್ನು ಪೂರೈಸುವ ನಮ್ಮ ಸಾಮರ್ಥ್ಯವನ್ನು ನೋಡಿ ಜಗತ್ತು ಈಗ ಆಶ್ಚರ್ಯ ಪಡುತ್ತಿದೆ, ಜಗತ್ತನ್ನೇ ಓಡಿಸುವ ಹೈಪರ್ ಟೆಕ್ನಾಲಜಿಯಲ್ಲಿ ನಮ್ಮ ದೇಶ ಮುಂದಿದೆ. ನಾವು ಡಿಜಿಟಲೀಕರಣದಲ್ಲಿ ಮಹತ್ತರವಾದ ದಾಪುಗಾಲುಗಳನ್ನು ಇಟ್ಟಿದ್ದೇವೆ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ದಾಖಲಿಸಿದ್ದೇವೆ. ನಾವು ವಿಶ್ವದಲ್ಲೇ ಹೆದ್ದಾರಿಗಳ ನಿರ್ಮಾಣದಲ್ಲಿ ಅತ್ಯುನ್ನತ ವೇಗವನ್ನು ಹೊಂದಿದ್ದೇವೆ ಮತ್ತು ಪ್ರತಿ ಮನೆಗೆ ಕುಡಿಯುವ ನೀರನ್ನು ಪೂರೈಸುವಂತಹ ಇತರ ಸಾಮಾಜಿಕ ಗುರಿಗಳನ್ನು ಶೀಘ್ರದಲ್ಲೇ ಸಾಧಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.