ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿ (ಎನ್.ಸಿ.ಎಫ್) ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಶಿಫಾರಸ್ಸಿನ ಅನ್ವಯ ಶಾಲಾ ಶಿಕ್ಷಣ, ಆರಂಭಿಕ ಹಂತದಲ್ಲಿ ಮಕ್ಕಳ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ಮಕ್ಕಳ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರೂಪಿಸಲಾಗಿದೆ.
ಈ ವೇಳೆ ಮಾತನಾಡಿದ ಪ್ರಧಾನ್, ರಾಷ್ಟ್ರೀಯ ಶಿಕ್ಷಣ ನೀತಿ 2020 ‘ತತ್ವಶಾಸ್ತ್ರ’ ವಾಗಿದ್ದರೆ, ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ‘ಮಾರ್ಗ’ ವಾಗಿದೆ ಮತ್ತು ಇಂದು ಬಿಡುಗಡೆ ಮಾಡಲಾದ ದಾಖಲೆಯು ನಮ್ಮ ನಾಗರಿಕತೆಯ ಭವಿಷ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ‘ಸಂವಿಧಾನ’ವಾಗಿದೆ ಎಂದಿದ್ದಾರೆ.
ಐಐಎಸ್ಸಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಎನ್ ಸಿ ಎಫ್ ತಂಡವನ್ನು ಅಭಿನಂದಿಸುತ್ತೇನೆ. ನಮ್ಮ ದೇಶದ ಭವಿಷ್ಯವನ್ನು ಸರ್ ಸಿವಿ ರಾಮನ್, ಡಾ.ಹೋಮಿ ಭಾಭಾ, ವಿಕ್ರಮ್ ಸಾರಾಭಾಯ್,ಡಾ. ಅಬ್ದುಲ್ ಕಲಾಂ ಅವರಂತಹ ಐಐಎಸ್ಸಿಗೆ ಸಂಬಂಧಿಸಿದ ಅನೇಕರು ಬದಲಾಯಿಸಿದ್ದಾರೆ. ನಮ್ಮ ಭವಿಷ್ಯದ ದಾಖಲೆಯನ್ನು ಇಲ್ಲಿ ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅಭಿವೃದ್ಧಿಯು ನಿಷ್ಪಕ್ಷಪಾತ ಮತ್ತು ನಿರಂತರ ಪ್ರಕ್ರಿಯೆಯಾಗಿದೆ.ಇದು ಸಮಾಜದ ದಾಖಲೆಯಾಗಿದೆ ಕ್ರಿಯಾಶೀಲ, ಪ್ರಗತಿಶೀಲ ನೀತಿಯನ್ನು ರೂಪಿಸುವ ಸಲುವಾಗಿ,ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಂದ ಎನ್ ಸಿಎಫ್ ಗಾಗಿ ಸಲಹೆಗಳನ್ನು ಪಡೆಯಲು ಅಪ್ಲಿಕೇಶನ್ ಆಧಾರಿತ ಪ್ರಕ್ರಿಯೆಯನ್ನು ರಚಿಸಲು ನಾನು ಸಲಹೆ ನೀಡಿದ್ದೇನೆ ಎಂದಿದ್ದಾರೆ.
ನಮ್ಮ ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಈ ಮಹತ್ವದ ದಿನವನ್ನು ಸಾಧ್ಯವಾಗಿಸಿದ ಎಲ್ಲಾ ತಜ್ಞರು,ಮತ್ತು ಬುದ್ಧಿಜೀವಿಗಳನ್ನು ನಾನು ಪ್ರಶಂಸಿಸುತ್ತೇನೆ. ಎನ್ ಇ ಪಿ- 2020 ಅನ್ನು ಆಧರಿಸಿದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ದಾಖಲೆಯು ಭಾರತದ ಶಿಕ್ಷಣದ ಮಾದರಿಯು ಪ್ರಪಂಚದಾದ್ಯಂತ ಉದಯೋನ್ಮುಖ ಆರ್ಥಿಕತೆಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.