ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ನಲ್ಲಿ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ವರ್ಚುವಲ್ ಆಗಿ ಅನಾವರಣಗೊಳಿಸಿದ್ದಾರೆ.
ಹನುಮಾನ್ ಜಿ ಚಾರ್ ಧಾಮ್ ಯೋಜನೆಯ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ನಾಲ್ಕು ಪ್ರತಿಮೆಗಳಲ್ಲಿ ಈ ಪ್ರತಿಮೆಯು ಎರಡನೆಯದು.
ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಹನುಮಾನ್ ಜಯಂತಿಯ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕಾಮನೆಗಳು. ಈ ಶುಭ ಸಂದರ್ಭದಲ್ಲಿ ಮೋರಬಿನಲ್ಲಿ ಹನುಮಂತನ ಪ್ರತಿಮೆ ಲೋಕಾರ್ಪಣೆಗೊಳಿಸುವ ಅವಕಾಶ ದೊರೆತಿದೆ. ಈ ದೇಶ ಮತ್ತು ಜಗತ್ತಿನಾದ್ಯಂತದ ಹನುಮ ಭಕ್ತರಿಗೆ ಇದು ಅತ್ಯಂತ ಸಂತೋಷದ ಸಂದರ್ಭ. ಹನುಮಂತನ 108 ಅಡಿ ಎತ್ತರದ ಇಂತಹ ಪ್ರತಿಮೆಯನ್ನು ದೇಶದ ವಿವಿಧೆಡೆ ಸ್ಥಾಪಿಸಲಾಗುತ್ತಿದೆ ಎಂಬುದು ಸಂತೋಷದ ಸಂಗತಿ.
ಎಲ್ಲರೊಂದಿಗೆ ಎಲ್ಲರ ಪ್ರಯತ್ನ ರಘುರಾಮನ ಜೀವನ ಸಂದೇಶವಾಗಿದೆ. ಇದರಲ್ಲಿ ಹನುಮಂತನ ಪಾಲು ಮಹತ್ವದ್ದು. ಎಲ್ಲರ ಪ್ರಯತ್ನದಲ್ಲಿ ಭಾವನೆಯೊಂದಿಗೆ ಸ್ವಾತಂತ್ರ್ಯದ ಅಮೃತ ಕಾಲವನ್ನು ನಾವು ಉಜ್ವಲಗೊಳಿಸೋಣ ರಾಷ್ಟ್ರೀಯ ಸಂಕಲ್ಪಗಳನ್ನು ಸಾಕಾರಗೊಳಿಸುವಲ್ಲಿ ಭಾಗಿಗಳಾಗೋಣ’ ಎಂದರು.
ಮೊರ್ಬಿಯಲ್ಲಿರುವ ಬಾಪು ಕೇಶವಾನಂದ ಜಿ ಅವರ ಆಶ್ರಮದಲ್ಲಿ ಪಶ್ಚಿಮದಲ್ಲಿ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಸರಣಿಯ ಮೊದಲ ಪ್ರತಿಮೆಯನ್ನು 2010 ರಲ್ಲಿ ಶಿಮ್ಲಾದ ಉತ್ತರದಲ್ಲಿರುವ ಜಖು ಬೆಟ್ಟದಲ್ಲಿ ಸ್ಥಾಪಿಸಲಾಯಿತು. ರಾಮೇಶ್ವರಂನಲ್ಲಿ ದಕ್ಷಿಣದಲ್ಲಿ ಪ್ರತಿಮೆಯ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶಿಮ್ಲಾದಲ್ಲಿ ನಿರ್ಮಿಸಲಾದ ಮೊದಲ ದೈತ್ಯ ಪ್ರತಿಮೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ ಮತ್ತು ರಾಜಸ್ಥಾನದ ಶಿಲ್ಪಿಯೊಬ್ಬರು ಇದನ್ನು ಕೆತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರತಿಮೆಯನ್ನು ನಿರ್ಮಿಸಲು ಸುಮಾರು 1,500 ಟನ್ಗಳಷ್ಟು ವಸ್ತುಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.