ನವದೆಹಲಿ: ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ 40,000 ಟನ್ ಅಕ್ಕಿಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದು, ಈಗಾಗಲೇ ಇದರ ಸಾಗಾಣೆ ಆರಂಭವಾಗಿದೆ.
ಆಹಾರದ ಕೊರತೆಯ ಹೊರತಾಗಿ, ಭಾರತವು ದ್ವೀಪ ರಾಷ್ಟ್ರದಲ್ಲಿನ ಇಂಧನ ಬಿಕ್ಕಟ್ಟನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. ಮೂಲಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶ್ರೀಲಂಕಾಕ್ಕೆ 40,000 ಟನ್ ಡೀಸೆಲ್ ಅನ್ನು ಶೀಘ್ರದಲ್ಲೇ ಒದಗಿಸುವ ನಿರೀಕ್ಷೆಯಿದೆ.
ಈ ಡೀಸೆಲ್ ರವಾನೆಯು ಫೆಬ್ರವರಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಲು ಶ್ರೀಲಂಕಾಗೆ ಘೋಷಿಸಲಾದ ಕ್ರೆಡಿಟ್ ಲೈನ್ನ ಅಡಿಯಲ್ಲಿ ಕಳುಹಿಸಲಾಗುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಏಳು ಮಾಸಿಕ ಸಾಗಣೆಗಳಿಗಿಂತ ಹೆಚ್ಚಾಗಿದೆ.
ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರನಾಗಿದೆ. ಇಂಧನ, ಆಹಾರ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಶ್ರೀಲಂಕಾದಲ್ಲಿ ಉದ್ಭವಿಸಿರುವ ಕೊರತೆಯನ್ನು ಪರಿಹರಿಸಲು ಮಾರ್ಚ್ನಲ್ಲಿ $ 1 ಶತಕೋಟಿ ಸಾಲವನ್ನು ಒದಗಿಸಲು ಭಾರತ ಒಪ್ಪಿಕೊಂಡಿದೆ. ಈ ಉಪಕ್ರಮವು ಕೊಲಂಬೊಗೆ ಅಕ್ಕಿ ಬೆಲೆಗಳನ್ನು ಇಳಿಸಲು ಸಹಾಯ ಮಾಡುತ್ತದೆ. ಅಲ್ಲಿನ ಅಕ್ಕಿ ದರ ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ.
ಅಡೆತಡೆಗಳ ನಡುವೆಯೂ ಡೀಸೆಲ್ ಹೆಚ್ಚುವರಿ ಪೂರೈಕೆಗಾಗಿ ಶ್ರೀಲಂಕಾದ ಮನವಿಗೆ ಭಾರತ ಒಪ್ಪಿಗೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.