ಶ್ರೀನಗರ: ಕಣಿವೆಯ ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಕಾಶ್ಮೀರದ ತುಲಿಪ್ ಗಾರ್ಡನ್ ಅನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರವಾಸಿಗರಿಗೆ ಮುಕ್ತಗೊಳಿಸಿದ ನಂತರ ಜಗತ್ತಿನಾದ್ಯಂತ ಪ್ರವಾಸಿಗರಿಗೆ ವಸಂತ ಋತುವಿನಲ್ಲಿ ಇದು ಮೊದಲ ಆಕರ್ಷಣೆಯಾಗಿದೆ. ಹಾಲೆಂಡ್ ಮತ್ತು ನೆದರ್ಲೆಂಡ್ಸ್ನ ತುಲಿಪ್ ಗಾರ್ಡನ್ ಬಳಿಕ ಕಾಶ್ಮೀರದ ತುಲಿಪ್ ಗಾರ್ಡನ್ ಅನ್ನು ವಿಶ್ವದ ಮೊದಲ ಮೂರು ತುಲಿಪ್ ಉದ್ಯಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
2007 ರಲ್ಲಿ ಉದ್ಘಾಟನೆಗೊಂಡ ಈ ಉದ್ಯಾನವು ಪ್ರತಿ ವರ್ಷವೂ ಪ್ರಪಂಚದಾದ್ಯಂತದ ಪ್ರಕೃತಿ ಪ್ರೇಮಿಗಳ ಹೃದಯವನ್ನು ಗೆದ್ದಿದೆ. ಈ ವರ್ಷ, ಪ್ರವಾಸಿಗರನ್ನು ಸ್ವಾಗತಿಸಲು 68 ವಿವಿಧ ಸುಂದರವಾದ ಬಣ್ಣಗಳೊಂದಿಗೆ 1.5 ಮಿಲಿಯನ್ ತುಲಿಪ್ಗಳು ಉದ್ಯಾನವನದಲ್ಲಿ ಅರಳಿ ನಿಂತಿವೆ.
ಪ್ರವಾಸೋದ್ಯಮ ಕಾಶ್ಮೀರದ ನಿರ್ದೇಶಕ ಜಿಎನ್ ಇಟೂ ಮಾತನಾಡಿ, “ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಪ್ರಮುಖ ಆಕರ್ಷಣೆಯಾಗಿದೆ. ಟುಲಿಪ್ ಗಾರ್ಡನ್ಗೆ ಭೇಟಿ ನೀಡದೆ ಪ್ರವಾಸವು ಅಪೂರ್ಣವಾಗುತ್ತದೆ ಎಂದು ಪ್ರವಾಸಿಗರು ಭಾವಿಸುತ್ತಾರೆ. ಜೊತೆಗೆ, ಇದು ಕಾಶ್ಮೀರದ ಪ್ರವಾಸಿ ಋತುವನ್ನು ಸುಮಾರು ಒಂದು ತಿಂಗಳವರೆಗೆ ಮುಂದೂಡಿದೆ” ಎಂದಿದ್ದಾರೆ
ಕಳೆದ ಒಂದು ತಿಂಗಳಿನಿಂದ ಜನರು ಉದ್ಯಾನವನ್ನು ತೆರೆಯುವ ದಿನಾಂಕಗಳ ಬಗ್ಗೆ ಕೇಳುತ್ತಿದ್ದರು, ನಾವು ಮುಂದಿನ ದಿನಗಳಲ್ಲಿ ಮೆಗಾ ತುಲಿಪ್ ಉತ್ಸವ ಆಯೋಜಿಸುತ್ತಿದ್ದೇವೆ ಮತ್ತು ಕೆಲವು ದೊಡ್ಡ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.