ನವದೆಹಲಿ: ತುರ್ಕಮೆನಿಸ್ಥಾನದ ಅಧ್ಯಕ್ಷರ ಆಹ್ವಾನದ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಏಪ್ರಿಲ್ 1 ರಿಂದ 4 ರವರೆಗೆ ತುರ್ಕಮೆನಿಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇದು ತುರ್ಕಮೆನಿಸ್ತಾನ್ಗೆ ಭಾರತದ ರಾಷ್ಟ್ರಪತಿಗಳ ಮೊದಲ ಭೇಟಿಯಾಗಿದೆ.
ಭೇಟಿಯ ಸಮಯದಲ್ಲಿ, ರಾಷ್ಟ್ರಪತಿಗಳು ತುರ್ಕಮೆನಿಸ್ಥಾನದ ಹೊಸ ಅಧ್ಯಕ್ಷ ಸೆರ್ದಾರ್ ಬರ್ಡಿಮುಹಮೆಡೋವ್ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ಇಬ್ಬರೂ ನಾಯಕರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. 2022 ರ ಜನವರಿಯಲ್ಲಿ ನಡೆದ ಭಾರತ-ಮಧ್ಯ ಏಷ್ಯಾ ಶೃಂಗಸಭೆಯ ಫಲಿತಾಂಶಗಳ ಅನುಷ್ಠಾನ ಸೇರಿದಂತೆ ಕೆಲವು ಒಪ್ಪಂದಗಳು ಅಥವಾ ಭೇಟಿಯ ಸಂದರ್ಭದಲ್ಲಿ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆಯಿದೆ.
ತುರ್ಕಮೆನಿಸ್ಥಾನ ಭೇಟಿಯ ನಂತರ ರಾಷ್ಟ್ರಪತಿಗಳು ನೆದರ್ಲ್ಯಾಂಡ್ಸ್ಗೆ ಏಪ್ರಿಲ್ 4 ರಿಂದ 7 ರವರೆಗೆ ಭೇಟಿ ನೀಡಲಿದ್ದಾರೆ. ನೆದರ್ಲ್ಯಾಂಡ್ಸ್ಗೆ ಭೇಟಿ ನೀಡುವ ಸಂದರ್ಭದಲ್ಲಿ, ಅವರು ರಾಯಲ್ ಮೆಜೆಸ್ಟಿಸ್ ಮತ್ತು ನೆದರ್ಲ್ಯಾಂಡ್ಸ್ ಪ್ರಧಾನ ಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ನೆದರ್ಲ್ಯಾಂಡ್ಸ್ ಕಿಂಗ್ ವಿಲ್ಲೆಮ್-ಅಲೆಕ್ಸಾಂಡರ್ ಮತ್ತು ಕ್ವೀನ್ ಮ್ಯಾಕ್ಸಿಮಾ ಅವರು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಗೆ ಆಹ್ವಾನಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಭೇಟಿಯು ಮಹತ್ವದ್ದಾಗಿದೆ, ಏಕೆಂದರೆ 2022 ರಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 75 ವರ್ಷಗಳನ್ನು ಆಚರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.