ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು, ಇಂದು ಅವರು ತಮ್ಮ ಭದ್ರತೆಗೆ ಸಂಪೂರ್ಣ ಮಹಿಳಾ ತಂಡವನ್ನೇ ನಿಯೋಜಿಸಿದ್ದಾರೆ.
ಮಾತ್ರವಲ್ಲದೇ ಮಹಿಳಾ ದಿನಾಚರಣೆಯ ಅಂಗವಾಗಿ ಅವರು ತಮ್ಮ ರಾಜ್ಯದ ರಾಜಧಾನಿ ಭೋಪಾಲ್ನಲ್ಲಿ ಮಹಿಳಾ ಸಿಬ್ಬಂದಿ ಮತ್ತು ತುಕಡಿಯೊಂದಿಗೆ ಸಸಿಗಳನ್ನು ನೆಟ್ಟರು.
ಈ ದಿನವನ್ನು ಸೂಕ್ತ ರೀತಿಯಲ್ಲಿ ಆಚರಿಸಲು ಮಧ್ಯಪ್ರದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಮಹಿಳೆಯರಿಗಾಗಿ ವಿಶೇಷ ಸಹಾಯವಾಣಿ ಡೆಸ್ಕ್ಗೆ ಚಾಲನೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಘಟಕದ ವಕ್ತಾರ ಪಂಕಜ್ ಚತುರ್ವೇದಿ ಮಾತನಾಡಿ, “ಇದು ಖಂಡಿತವಾಗಿಯೂ ಮಹತ್ವದ ದಿನವಾಗಿದೆ. ಸಂಪೂರ್ಣ ಮಹಿಳಾ ಭದ್ರತಾ ಪಡೆಗಳು ಇಂದು ಮುಖ್ಯಮಂತ್ರಿಯವರನ್ನು ರಕ್ಷಣೆಯ ಹೊಣೆ ಹೊತ್ತುಕೊಂಡಿದೆ. ಚೌಹಾಣ್ ಅವರ ಉತ್ತಮ ಮತ್ತು ವಿಶೇಷವಾದ ನಡೆ ಶ್ಲಾಘನೀಯ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.