ನವದೆಹಲಿ: ರೈಲು ಅಪಘಾತಗಳನ್ನು ತಪ್ಪಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಪರಿಶೀಲಿಸಲು ಭಾರತೀಯ ರೈಲ್ವೇ ನಡೆಸಿದ ‘ಕವಚ’ ಸಿಸ್ಟಂ ಪರೀಕ್ಷೆ ಯಶಸ್ವಿಯಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಅವರು ನಿನ್ನೆ ಸಿಕಂದರಾಬಾದ್ ಬಳಿ ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯಾದ ʼಕವಚ್ʼ ಶೂನ್ಯ ಅಪಘಾತಗಳ ಗುರಿ ಸಾಧನೆಯ ಹಾದಿಯಲ್ಲಿ ರೈಲ್ವೇಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
ಇತರ ಲೋಕೋಮೋಟಿವ್ಗಳಿಗೆ ಹೋಲಿಸಿದರೆ ಕವಚ್ ಮುಂಭಾಗದಲ್ಲಿ 380 ಮೀಟರ್ಗಳ ಮೊದಲು ಸ್ವಯಂಚಾಲಿತವಾಗಿ ರೈಲನ್ನು ನಿಲ್ಲಿಸಿದೆ. ಕವಚದ ಯಶಸ್ವಿ ಪರೀಕ್ಷೆಯ ಕುರಿತು ರೈಲ್ವೆ ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಈ ಪರೀಕ್ಷೆಯು ಎರಡು ರೈಲುಗಳನ್ನು ಒಳಗೊಂಡಿತ್ತು – ಒಂದು ರೈಲಿನಲ್ಲಿ ರೈಲ್ವೇ ಸಚಿವರು ಇದ್ದರು ಮತ್ತು ಇನ್ನೊಂದು ರೈಲಿನಲ್ಲಿ ರೈಲ್ವೇ ಮಂಡಳಿಯ ಅಧ್ಯಕ್ಷರು ಇದ್ದರು. ಈ ಎರಡು ರೈಲುಗಳು ಪೂರ್ಣ ವೇಗದಲ್ಲಿ ಒಂದಕ್ಕೊಂದು ಹಾದು ಹೋಗಿವೆ. ಆದರೆ ಎರಡೂ ರೈಲುಗಳು 380 ಮೀಟರ್ ಅಂತರದಲ್ಲಿ ನಿಂತುಕೊಂಡಿವೆ. ಕವಚ್ ವಿಶ್ವದ ಅಗ್ಗದ ಸ್ವಯಂಚಾಲಿತ ರೈಲು ಡಿಕ್ಕಿ ರಕ್ಷಣೆ ವ್ಯವಸ್ಥೆಯಾಗಲಿದೆ.
ಒಮ್ಮೆ ಜಾರಿಗೆ ಬಂದರೆ ಪ್ರತಿ ಕಿಲೋಮೀಟರ್ಗೆ ಕಾರ್ಯಾಚರಣೆಗೆ 50 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಶ್ವಾದ್ಯಂತ ತಗಲುವ ಸುಮಾರು 2 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಇದು ಅಗ್ಗದ ವ್ಯವಸ್ಥೆಯಾಗಿದೆ.
आत्मनिर्भर भारत की मिसाल- भारत में बनी ‘कवच’ टेक्नोलॉजी।
Successfully tested head-on collision. #BharatKaKavach pic.twitter.com/w66hMw4d5u— Ashwini Vaishnaw (@AshwiniVaishnaw) March 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.