ನವದೆಹಲಿ: ಭಾರತದ ಅಧಿಕಾರಿಗಳ ಜೊತೆ ಪೂರ್ವ ಸಮನ್ವಯ ಇಲ್ಲದೆ ಉಕ್ರೇನ್ ನಿಂದ ನಿರ್ಗಮಿಸಲು ಯಾವುದೇ ಗಡಿ ಪೋಸ್ಟ್ ಗಳಿಗೆ ತೆರಳಬೇಡಿ ಎಂದು ಭಾರತೀಯ ರಾಯಭಾರ ಕಚೇರಿಯು ಉಕ್ರೇನ್ನಲ್ಲಿನ ಭಾರತೀಯ ನಾಗರಿಕರಿಗೆ ಮನವಿ ಮಾಡಿದೆ.
ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್ನಿಂದ ಭಾರತಕ್ಕೆ ವಾಪಸಾಗುವ ಸಲುವಾಗಿ ಸಾವಿರಾರು ಸಂಖ್ಯೆಯ ಭಾರತೀಯರು ಗಡಿ ಪೋಸ್ಟ್ ಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಈ ಸಲಹೆಯನ್ನು ನೀಡಿದೆ.
ಉಕ್ರೇನ್ ನಲ್ಲಿರುವ ಭಾರತೀಯರು ಎಲ್ಲಾ ಸಮಯದಲ್ಲೂ ಎಚ್ಚರಿಕೆಯಿಂದ ಇರಬೇಕು ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಉಕ್ರೇನ್ ಪೂರ್ವಭಾಗದಲ್ಲಿ ಇರುವವರು ತಮ್ಮ ನಿವಾಸಗಳಲ್ಲಿಯೇ ಉಳಿಯುವಂತೆ ಮತ್ತು ಸಾಧ್ಯವಾದಷ್ಟು ಒಳಗಡೆ ಇರುವಂತೆ ಸಲಹೆ ನೀಡಿದೆ
ಕೀವ್ನಲ್ಲಿರುವ ಭಾರತದ ರಾಯಭಾರ ಕಚೇರಿಯು ತುರ್ತು ನೆರವಿಗಾಗಿ ಗಡಿಗಳಲ್ಲಿ ಸಹಾಯವಾಣಿ ಸ್ಥಾಪಿಸಿದೆ.
ಪ್ರಸ್ತುತ ವಿವಿಧ ಗಡಿ ಚೆಕ್ ಪಾಯಿಂಟ್ ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ಜಮಾಯಿಸಿದ್ದಾರೆ. ಅವರನ್ನು ಸಂಪರ್ಕಿಸಿ ನೆರವು ಒದಗಿಸುವುದು ಕಷ್ಟಕರವಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಸಮನ್ವಯ ಇಲ್ಲದೆ ಗಡಿ ಪೋಸ್ಟ್ ತಲುಪದಂತೆ ಸಲಹೆ ನೀಡಲಾಗಿದೆ.
ವಿವಿಧ ಗಡಿ ಪಾಯಿಂಟ್ ಗಳಲ್ಲಿ ಪರಿಸ್ಥಿತಿ ತುಂಬಾನೇ ಸೂಕ್ಷ್ಮವಾಗಿದ್ದು, ರಾಯಭಾರ ಕಚೇರಿಯು ಬೇರೆ ದೇಶಗಳ ಮೂಲಕ ವಿಮಾನದಲ್ಲಿ ಭಾರತೀಯರನ್ನು ಸ್ಥಳಾಂತರಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.