ಪಾಲಕ್ಕಾಡ್: ಕೇರಳದ ಮಲಂಬುಲ ಪರ್ವತಗಳು ಕಡಿದಾದ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಭಾರತೀಯ ಸೇನೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.
23ವರ್ಷದ ಬಾಬು ಎಂಬುವವರು ಸೋಮವಾರ ಮೂವರು ಸ್ನೇಹಿತರ ಜೊತೆಗೆ ಚಾರಣಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಕಡಿದಾದ ಬೆಟ್ಟದ ನಡುವೆ ಸಿಲುಕಿದ್ದರು. ಈ ಬೆಟ್ಟ ಸುಮಾರು ನೂರು ಮೀಟರ್ ಎತ್ತರವಿದೆ. ಬಾಬು ಸುಮಾರು ಎರಡು ದಿನಗಳ ಕಾಲ ಇಲ್ಲಿ ಅನ್ನ ನೀರು ಇಲ್ಲದೆ ಸಿಲುಕಿಕೊಂಡಿದ್ದರು.
ಹೆಲಿಕಾಫ್ಟರ್ ಮೂಲಕ ಇವರನ್ನು ಪ್ರಯತ್ನ ನಡೆಸಲಾಯಿತು, ಡ್ರೋನ್ ಮೂಲಕ ಆಹಾರ ಪೂರೈಸುವ ಪ್ರಯತ್ನ ನಡೆಸಲಾಯಿತು. ಆದರೆ ಎರಡು ಪ್ರಯತ್ನಗಳು ಕೂಡ ವಿಫಲಗೊಂಡವು.
ಕೊನೆಗೆ ಕೇರಳ ಸರಕಾರ ಭಾರತೀಯ ಸೇನೆಗೆ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿತು. ಈ ಮನವಿಯ ಮೇರೆಗೆ ಸೇನೆ ಎರಡು ತಂಡಗಳನ್ನು ಮಂಗಳವಾರ ರಾತ್ರಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿತು.
ಮದ್ರಾಸ್ ರೆಜಿಮೆಂಟ್ ನ 12 ಮಂದಿಯ ತಂಡದಲ್ಲಿ ಪರ್ವತಾರೋಹಿಗಳು ಸೇರಿದಂತೆ ಸಿಬ್ಬಂದಿಗಳು ಇದ್ದರು. ಅಂತೆಯೇ ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್ನ 22 ಸಿಬ್ಬಂದಿಯನ್ನು ವಿಮಾನ ಮಾರ್ಗವಾಗಿ ಸೋಲೂರು ಮೂಲಕ ಘಟನಾ ಸ್ಥಳಕ್ಕೆ ತಲುಪಿಸಲಾಗಿತ್ತು.
ಕೊನೆಗೂ ಇವರ ಪ್ರಯತ್ನದ ಫಲವಾಗಿ ಬಾಬು ಅವರನ್ನು ಯಶಸ್ವಿಯಾಗಿ ರಕ್ಷಣೆ ರಕ್ಷಣೆ ಮಾಡಿದ ಬಳಿಕ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಲಾಗಿದೆ.
#UPDATE | Babu, the youth trapped in a steep gorge in Malampuzha mountains in Palakkad, Kerala has now been rescued. Teams of the Indian Army had undertaken the rescue operation. pic.twitter.com/kymVOLzPCm
— ANI (@ANI) February 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.