ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಟೀತ್ವಾಲ್ನ ಎಲ್ಒಸಿ ಬಳಿ ಮಾತೆ ಶಾರದಾ ದೇವಿಯ ದೇಗುಲವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 3 ರಂದು ಕಾಶ್ಮೀರದ ಶಾರದ ಯಾತ್ರೆ (ಸರ್ವಜ್ಞ ಪೀಠ) ದೇವಸ್ಥಾನ ಸಮಿತಿಯ ಶ್ರೀ ರವೀಂದರ್ ಪಂಡಿತರವರು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂ ಮತ್ತು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ಭೇಟಿಯಾಗಿ ನೂತನ ಶಾರದಾ ದೇವಿಯ ದೇಗುಲ ನಿರ್ಮಾಣಕ್ಕೆ ಆಶೀರ್ವಾದ ಪಡೆದರು.
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ದಕ್ಷಿಣಾಮ್ನಾಯ ಪೀಠವನ್ನು ಸ್ಥಾಪಿಸುವಾಗ ಶೃಂಗೇರಿಯಲ್ಲಿ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿದರು ಮತ್ತು ಅವರ ದಿಗ್ವಿಜಯ ಯಾತ್ರೆಯ ಕೊನೆಯಲ್ಲಿ ಕಾಶ್ಮೀರದಲ್ಲಿ ಶಾರದಾ ದೇವಿಯ ಸರ್ವಜ್ಞ ಪೀಠವನ್ನು ಏರಿದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಶಾರದಾ ದೇವಿಯನ್ನು ಕಾಶ್ಮೀರದಲ್ಲಿ ಅನಾದಿ ಕಾಲದಿಂದಲೂ ಪೂಜಿಸಲಾಗುತ್ತಿದೆ ಮತ್ತು ಇದಕ್ಕಾಗಿ ಶಾರದೆಯನ್ನು “ಕಾಶ್ಮೀರ-ಪುರವಾಸಿನಿ” ಎಂದು ಕರೆಯಲಾಗುತ್ತದೆ.
ಕಾಶ್ಮೀರದ ಎಲ್ಒಸಿ ಬಳಿಯ ಕಿಶನ್ಗಂಗಾ ನದಿಯ ದಡದಲ್ಲಿರುವ ಟೀತ್ವಾಲ್ ಸಾಂಪ್ರದಾಯಿಕವಾಗಿ ಕಾಶ್ಮೀರದ ಶಾರದಾಂಬೆಯ ಸರ್ವಜ್ಞ ಪೀಠಕ್ಕೆ ವಾರ್ಷಿಕ ಯಾತ್ರೆ ಪ್ರಾರಂಭವಾಗುವ ಸ್ಥಳಗಳಲ್ಲಿ ಒಂದಾಗಿದೆ.
ಶೃಂಗೇರಿ ಜಗದ್ಗುರುಗಳ ದರ್ಶನ ಪಡೆದ ಸಂದರ್ಭದಲ್ಲಿ ಶ್ರೀ ರವೀಂದರ್ ಪಂಡಿತರು ಕಾಶ್ಮೀರದ ಸರ್ವಜ್ಞ ಪೀಠದ ಪ್ರಾಚೀನ ರಚನೆಯಿಂದ ಎರಡು ಕಲ್ಲುಗಳು ಮತ್ತು ಪವಿತ್ರ ಮರಳಿನ ಸಮರ್ಪಣೆ ಮಾಡಿದರು. ಅಲ್ಲದೇ ಜಗದ್ಗುರು ಶ್ರೀ ಮಹಾಸನ್ನಿಧಾನಂ ಅವರು ಒಂದು ಶಿಲೆಯನ್ನು ನೀಡಿದರು ಮತ್ತು ಟೀತ್ವಾಲ್ನಲ್ಲಿ ನೂತನ ಶಾರದ ದೇವಸ್ಥಾನದ ನಿರ್ಮಾಣ ಸಮಿತಿಗೆ ಆಶೀರ್ವಾದ ನೀಡಿದರು
ಶೃಂಗೇರಿ ಮಠದ ಸಿಇಒ ವಿ.ಆರ್.ಗೌರಿಶಂಕರ್ ಅವರು ಟೀತ್ವಾಲ್ನಲ್ಲಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ಶೃಂಗೇರಿ ಮಠವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಮತ್ತು ಪ್ರತಿಷ್ಠಾಪನೆಗೆ ಶಾರದಾ ದೇವಿಯ ಹೊಸ ಪಂಚಲೋಹ ವಿಗ್ರಹವನ್ನು ನೀಡುತ್ತದೆ ಎಂದು ಈ ವೇಳೆ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.