ನವದೆಹಲಿ: ವಿಶೇಷ ಚೇತನ ಚೆಸ್ ಆಟಗಾರ್ತಿ ಮಲಿಕಾ ಹಂಡಾ ಅವರು ಪಂಜಾಬ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಿವುಡರ ಕ್ರೀಡೆಗೆ ಸಂಬಂಧಿಸಿದಂತೆ ಸರ್ಕಾರವು ಯಾವುದೇ ನೀತಿಯನ್ನು ಹೊಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ನನಗೆ ಉದ್ಯೋಗ ಮತ್ತು ನಗದು ಬಹುಮಾನವನ್ನು ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್ ಕ್ರೀಡಾ ಸಚಿವ ಪರ್ಗತ್ ಸಿಂಗ್ ತಿಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಿಶ್ವ ಕಿವುಡರ ಚೆಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿರುವ ಹಾಂಡಾ ಅವರು ಡಿಸೆಂಬರ್ 31 ರಂದು ಕ್ರೀಡಾ ಸಚಿವರನ್ನು ಭೇಟಿಯಾಗಿದ್ದರು. ಈ ವೇಳೆ ಅವರಿಗೆ ಉದ್ಯೋಗ ಮತ್ತು ನಗದು ಪ್ರಶಸ್ತಿ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ ಎನ್ನಲಾಗಿದೆ.
“ನನಗೆ ತುಂಬಾ ನೋವಾಗಿದೆ. 31 ಡಿಸೆಂಬರ್ ನಾನು ಪಂಜಾಬ್ನ ಕ್ರೀಡಾ ಸಚಿವರನ್ನು ಭೇಟಿ ಮಾಡಿದ್ದೇನೆ ಈಗ ಅವರು ಪಂಜಾಬ್ ಸರ್ಕಾರವು ಕಿವುಡ ಕ್ರೀಡೆಗಳಿಗೆ ನೀತಿಯನ್ನು ಹೊಂದಿಲ್ಲದ ಕಾರಣ ಉದ್ಯೋಗ ನೀಡಲು ಮತ್ತು ನಗದು ಪ್ರಶಸ್ತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಾಜಿ ಕ್ರೀಡಾ ಸಚಿವರು ನನಗೆ ನಗದು ಘೋಷಿಸಿದ್ದರು, ನನ್ನ ಬಳಿ ಅವರು ನೀಡಿದ ಆಮಂತ್ರಣ ಪತ್ರವಿದೆ. ಅದರಲ್ಲಿ ನನ್ನನ್ನು ಆಹ್ವಾನಿಸಲಾಗಿತ್ತು ಆದರೆ ಕೋವಿಡ್ನಿಂದ ರದ್ದುಗೊಳಿಸಲಾಗಿದೆ. ಈ ವಿಷಯವನ್ನು ನಾನು ಕ್ರೀಡಾ ಸಚಿವ ಪರ್ಗತ್ ಸಿಂಗ್ ಅವರಿಗೆ ಹೇಳಿದಾಗ ಅವರು, “ಇದು ಮಾಜಿ ಸಚಿವ ಘೋಷಿಸಿದ್ದು, ನಾನು ಘೋಷಿಸಲಿಲ್ಲ ಮತ್ತು ಸರ್ಕಾರವು ಏನು ಮಾಡಲು ಸಾಧ್ಯವಿಲ್ಲ” ಎಂದರು”ಎಂದು ಹಾಂಡಾ ಭಾನುವಾರ ಟ್ವೀಟ್ ಮಾಡಿದ್ದಾರೆ.
ಹಂಡಾ ಪ್ರಕಾರ, ಪಂಜಾಬ್ ಮಾಜಿ ಕ್ರೀಡಾ ಸಚಿವರು ಅವರಿಗೆ ನಗದು ಬಹುಮಾನವನ್ನು ಘೋಷಿಸಿದ್ದರು. ಆದರೆ ಈಗಿನ ಸಚಿವರು ನಗದು ನೀಡಲು ನಿರಾಕರಿಸುತ್ತಿದ್ದಾರೆ.
“ಏಕೆ ನನಗೆ ನಗದು ಘೋಷಣೆ ಮಾಡಲಾಯಿತು ಎಂದು ಕೇಳುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಸಮಯ 5 ವರ್ಷ ವ್ಯರ್ಥವಾಯಿತು. ಅವರು ನನ್ನನ್ನು ಮೂರ್ಖಳನ್ನಾಗಿಸಿದ್ದಾರೆ. ಕಿವುಡರ ಕ್ರೀಡೆಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ” ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
I m very feeling Hurt
31 dec I met sports minister of Punjab @PargatSOfficial
Now He said punjab Govt can not give job and Not cash award accept to (Deaf sports) because they do not have policy for deaf sports.
Cc: @CHARANJITCHANNI @sherryontopp @RahulGandhi @rhythmjit @ANI pic.twitter.com/DrZ97mtSNH— Malika Handa🇮🇳🥇 (@MalikaHanda) January 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.