ನವದೆಹಲಿ: ಕೋವಿಡ್ ಮತ್ತು ಓಮಿಕ್ರಾನ್ ವೇರಿಯಂಟ್ ವಿರುದ್ಧ ಜಾಗರೂಕತೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದಾರೆ.
ಆಲ್ ಇಂಡಿಯಾ ರೇಡಿಯೊದಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವಿಜ್ಞಾನಿಗಳು ಹೊಸ ಓಮಿಕ್ರಾನ್ ರೂಪಾಂತರವನ್ನು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಪ್ರತಿದಿನ ಹೊಸ ಡೇಟಾವನ್ನು ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ರೂಪಾಂತರದ ವಿರುದ್ಧ ಹೋರಾಡಲು ಜನರ ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ಅಳವಡಿಸಿಕೊಳ್ಳಬೇಕು . ಈ ಸಾಮೂಹಿಕ ಶಕ್ತಿಯೇ ಕೋವಿಡ್ ಅನ್ನು ಸೋಲಿಸುತ್ತದೆ. ಈ ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ 2022 ಕ್ಕೆ ನಾವು ಹೆಜ್ಜೆ ಹಾಕಬೇಕೆಂದು ಅವರು ಜನರಿಗೆ ಕರೆ ನೀಡಿದರು.
ಪ್ರತಿಯೊಬ್ಬರ ಪ್ರಯತ್ನದಿಂದಲೇ ಭಾರತವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಾಯಿತು ಎಂದು ಮೋದಿ ಹೇಳಿದರು. ಭಾರತದ ವ್ಯಾಕ್ಸಿನೇಷನ್ ಅಂಕಿಅಂಶಗಳನ್ನು ವಿಶ್ವದ ಇತರ ದೇಶಗಳೊಂದಿಗೆ ಹೋಲಿಸಿದಾಗ, ದೇಶವು ದೊಡ್ಡ ಸಾಧನೆಯನ್ನು ಮಾಡಿದೆ. ಇದು ಹೆಮ್ಮೆಯ ಸಂಗತಿಯಾಗಿದೆ. 140 ಮಿಲಿಯನ್ ಲಸಿಕೆ ಡೋಸ್ ಅನ್ನು ದಾಟಿರುವುದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ ಎಂದು ಅವರು ಹೇಳಿದರು. ಇದು ವ್ಯವಸ್ಥೆಯಲ್ಲಿ, ವಿಜ್ಞಾನದಲ್ಲಿ ಮತ್ತು ವಿಜ್ಞಾನಿಗಳಲ್ಲಿ ಪ್ರತಿಯೊಬ್ಬ ಭಾರತೀಯನ ನಂಬಿಕೆಯನ್ನು ತೋರಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಈ ತಿಂಗಳು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಬಲಿಯಾದ ವೀರ ಯೋಧರನ್ನು ಮೋದಿ ಸ್ಮರಿಸಿದ್ದಾರೆ.
ಪ್ರಧಾನಮಂತ್ರಿ ಅವರು ಪರೀಕ್ಷಾ ಪೆ ಚರ್ಚಾವನ್ನು ನಡೆಸುವುದಾಗಿ ಘೋಷಿಸಿದರು ಮತ್ತು ಈ ಕಾರ್ಯಕ್ರಮದ ನೋಂದಣಿಯನ್ನು ಇದೇ ತಿಂಗಳ 28 ರಂದು MyGov.in ನಲ್ಲಿ ಪ್ರಾರಂಭಿಸಲಾಗುವುದು. ಈ ನೋಂದಣಿ ಮುಂದಿನ ವರ್ಷ ಜನವರಿ 20 ರವರೆಗೆ ಮುಂದುವರಿಯುತ್ತದೆ. ಇದಕ್ಕಾಗಿ, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಆನ್ಲೈನ್ ಸ್ಪರ್ಧೆಯನ್ನು ಸಹ ಆಯೋಜಿಸಲಾಗುತ್ತದೆ. ಎಲ್ಲರೂ ಇದರಲ್ಲಿ ಭಾಗವಹಿಸುವಂತೆ ಕೇಳಿಕೊಂಡರು ಮತ್ತು ಒಟ್ಟಿಗೆ ಪರೀಕ್ಷೆಗಳು, ವೃತ್ತಿಜೀವನ, ಯಶಸ್ಸು ಮತ್ತು ವಿದ್ಯಾರ್ಥಿ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ವಿಚಾರ ಮಂಥನ ನಡೆಸುವುದಾಗಿ ಅವರು ಹೇಳಿದರು.
ಮೋದಿ ಅವರು ಗ್ರೀಸ್ನ ವಿದ್ಯಾರ್ಥಿಗಳು ವಂದೇ ಮಾತರಂ ಹಾಡುವ ವೀಡಿಯೊದ ತುಣುಕನ್ನು ಸಹ ಪ್ಲೇ ಮಾಡಿದ್ದಾರೆ. ಅವರು “ವಂದೇ ಮಾತರಂ” ಅನ್ನು ಹಾಡಿದ ಬಗೆ ಮತ್ತು ಅವರ ಭಾವನೆ ಅದ್ಭುತವಾಗಿತ್ತು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಲಕ್ನೋದಲ್ಲಿ ನಡೆದ ವಿಶಿಷ್ಟ ಡ್ರೋನ್ ಶೋ ಬಗ್ಗೆ ಮೋದಿ ಉಲ್ಲೇಖಿಸಿರು. ಚೌರಿ ಚೌರಾ ಆಂದೋಲನ ಮತ್ತು ಕಾಕೋರಿ ರೈಲು ಘಟನೆ ಸೇರಿದಂತೆ ಭಾರತೀಯ ಸ್ವಾತಂತ್ರ್ಯ ಹೋರಾಟದ ವಿವಿಧ ಅಂಶಗಳನ್ನು ಜೀವಂತಗೊಳಿಸಿದ ಲಕ್ನೋದ ರೆಸಿಡೆನ್ಸಿ ಪ್ರದೇಶದಲ್ಲಿ ಈ ಡ್ರೋನ್ ಪ್ರದರ್ಶನವನ್ನು ಆಯೋಜಿಸಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವವು ದೇಶಕ್ಕೆ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಜೀವಂತವಾಗಿಡಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.