ನವದೆಹಲಿ: ಗುರು ನಾನಕ್ ಜಯಂತಿ ಅಥವಾ ಗುರುಪುರಬ್ ಅನ್ನು ಇಂದು ಭಾರತ ಮತ್ತು ಪ್ರಪಂಚದಾದ್ಯಂತ ಧಾರ್ಮಿಕ ಉತ್ಸಾಹಕತೆಯೊಂದಿಗೆ ಆಚರಿಸಲಾಗುತ್ತಿದೆ. ಇದು ಸಿಖ್ ಧರ್ಮಕ್ಕೆ ಅಡಿಪಾಯವನ್ನು ಹಾಕಿದ ಮೊದಲ ಸಿಖ್ ಗುರು ಗುರುನಾನಕ್ ದೇವ್ ಜಿ ಅವರ ಜನ್ಮ. ಈ ವರ್ಷ ಗುರುನಾನಕ್ ದೇವ್ ಜಿ ಅವರ 552 ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ
ಈ ದಿನದಂದು, ಪ್ರಪಂಚದಾದ್ಯಂತದ ಭಕ್ತರು ಗುರುದ್ವಾರಗಳಿಗೆ ತೆರಳಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗುರುಪುರಬ್ ಅನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತದೆ.
ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಗುರುಪುರಬ್ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಗುರುನಾನಕ್ ದೇವ್ ಅವರ ಉದಾತ್ತ ಆದರ್ಶಗಳಿಂದ ನಾನು ಆಳವಾಗಿ ಸ್ಫೂರ್ತಿ ಪಡೆದಿದ್ದೇನೆ. ಜಗತ್ತಿನಾದ್ಯಂತ ಗುರುನಾನಕ್ ದೇವ್ ಅವರ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಗುರುನಾನಕ್ ದೇವ್ ಜಿ ಅವರ ಜನ್ಮದಿನದ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. ಎಲ್ಲಾ ಭಾರತೀಯರಿಗೆ ವಿಶೇಷವಾಗಿ ಸಿಖ್ ಸಮುದಾಯದವರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದ ಕೋವಿಂದ್, ಗುರು ನಾನಕ್ ದೇವ್ ಜಿ ಅವರ ಜೀವನ ಮತ್ತು ಬೋಧನೆಗಳಲ್ಲಿನ ಪ್ರೀತಿ, ಸಹಾನುಭೂತಿ ಮತ್ತು ತ್ಯಾಗದ ಸೂಚ್ಯ ಸಂದೇಶವು ಮಾನವಕುಲದ ಆಧ್ಯಾತ್ಮಿಕ ಪ್ರಗತಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
On the special occasion of the Parkash Purab of Sri Guru Nanak Dev Ji, I recall his pious thoughts and noble ideals. His vision of a just, compassionate and inclusive society inspires us. Sri Guru Nanak Dev Ji’s emphasis on serving others is also very motivating.
— Narendra Modi (@narendramodi) November 19, 2021
गुरु नानक देव जी की जयंती के शुभ अवसर पर, मैं सभी देशवासियों, विशेष रूप से सिख समुदाय के भाइयों-बहनों को हार्दिक शुभकामनाएं देता हूं। आइए, हम सब गुरु नानक देव जी के बताए ‘नाम जपो, किरत करो, वंड छको’ के मार्ग पर चलें और अपने आचरण में उनकी शिक्षाओं का पालन करें।
— President of India (@rashtrapatibhvn) November 19, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.