ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರದಾನ ಮಾಡಿದ್ದಾರೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು 12 ಕ್ರೀಡಾಪಟುಗಳಿಗೆ ಪ್ರದಾನಿಸಲಾಗಿದೆ. ಅವರೆಂದರೆ ಅಥ್ಲೀಟ್ ನೀರಜ್ ಚೋಪ್ರಾ, ಕುಸ್ತಿಪಟು ರವಿಕುಮಾರ್, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಹಾಕಿ ಆಟಗಾರರಾದ ಶ್ರೀಜೇಶ್ ಪಿಆರ್ ಮತ್ತು ಮನ್ಪ್ರೀತ್ ಸಿಂಗ್, ಪ್ಯಾರಾ ಶೂಟರ್ ಅವನಿ ಲೆಖರಾ, ಪ್ಯಾರಾ ಅಥ್ಲೀಟ್ ಸುಮಿತ್ ಅಂಟಿಲ್, ಪ್ಯಾರಾ ಷಟ್ಲರ್ ಪ್ರಮೋದ್ ಭಗತ್, ಕೃಷ್ಣ ನಗರ, ಪ್ಯಾರಾ ಶೂಟರ್ ಮನೀಶ್ ನರ್ವಾಲ್, ಕ್ರಿಕೆಟರ್ ಮಿಥಾಲಿ, ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ.
35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರಲ್ಲಿ ಪ್ಯಾರಾ ಪ್ಯಾಡ್ಲರ್ ಭಾವನಾ ಪಟೇಲ್, ಪ್ಯಾರಾ ಆರ್ಚರ್ ಹರ್ವಿಂದರ್ ಸಿಂಗ್, ಅಥ್ಲೀಟ್ ಅರ್ಪಿಂದರ್ ಸಿಂಗ್, ಸೇಬರ್ ಫೆನ್ಸರ್ ಭವಾನಿ ದೇವಿ, ಕ್ರಿಕೆಟಿಗ ಶಿಖರ್ ಧವನ್, ಟೆನಿಸ್ ಆಟಗಾರ್ತಿ ಅಂಕಿತಾ ರೈನಾ, ಶೂಟರ್ ಅಭಿಷೇಕ್ ವರ್ಮಾ ಮತ್ತು ಬಾಕ್ಸರ್ ಸಿಮ್ರಂಜಿತ್ ಕೌರ್ ಸೇರಿದ್ದಾರೆ.
ರಾಷ್ಟ್ರಪತಿಗಳು ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ, ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ ಮತ್ತು ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರವನ್ನು ಸಹ ಪ್ರದಾನ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.