ನವದೆಹಲಿ: ಕೋವಿಡ್-19ನಿಂದ ಮೃತಪಟ್ಟವರ ಸ್ಮರಣಾರ್ಥ ತೆಲಂಗಾಣದ ಹಳ್ಳಿಯೊಂದರಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದ್ದು, ಅದನ್ನು ಗುರುವಾರ ಉದ್ಘಾಟನೆಗೊಳಿಸಲಾಗಿದೆ. ಇದು ಕೋವಿಡ್ ಸಂತ್ರಸ್ಥರಿಗಾಗಿನ ದೇಶದ ಮೊದಲ ಸ್ಮಾರಕ ಎಂದು ಪರಿಗಣಿಸಲ್ಪಟ್ಟಿದೆ.
ಭಾರತೀಯ ಮತ್ತು ಭಾರತೀಯ ಅನಿವಾಸಿ ವೈದ್ಯರು ಮತ್ತು ವೃತ್ತಿಪರರ ಸ್ವಯಂಸೇವಾ ಗುಂಪು ಪ್ರಾಜೆಕ್ಟ್ ಮದದ್ ವತಿಯಿಂದ ತೆಲಂಗಾಣದ ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ರಾಜಣ್ಣಪೇಟೆ ಗ್ರಾಮದಲ್ಲಿ ಈ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಈ ಸ್ಮಾರಕವನ್ನು 2020-2021ರಲ್ಲಿ ಕೋವಿಡ್-19 ನಿಂದ ಪ್ರಾಣ ಕಳೆದುಕೊಂಡ ಎಲ್ಲಾ ದೇಶವಾಸಿಗಳಿಗೆ ಸಮರ್ಪಿಸಲಾಗಿದೆ.
ಈ ಬಿಕ್ಕಟ್ಟಿನಲ್ಲಿ ಕಳೆದುಹೋದ ಹತ್ತಿರದವರನ್ನು ಮತ್ತು ಆತ್ಮೀಯರನ್ನು ಭಾರತವು ಮರೆಯಲು ಸಾಧ್ಯವಿಲ್ಲ ಅಥವಾ ಕೋವಿಡ್-19 ವಿರುದ್ಧದ ಜಾಗೃತಿಯನ್ನೂ ಮರೆಯುವುದಿಲ್ಲ ಎಂದು ಪ್ರಾಜೆಕ್ಟ್ ಮದದ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ದೇಶಕ್ಕೆ ಲಸಿಕೆ ನೀಡುವಲ್ಲಿ ಎಲ್ಲಾ ಮುಂಚೂಣಿಯ ಕಾರ್ಯಕರ್ತರ ವೀರತ್ವವನ್ನು ನಾವು ನೆನಪಿಸಿಕೊಳ್ಳಬೇಕು ಮತ್ತು ಗ್ರಾಮೀಣ ಆರೋಗ್ಯ ಕಾರ್ಯಕರ್ತರ ನಿರಂತರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.
”ಭಾರತದ ಹಳ್ಳಿಗಳು ಈ ಬಿಕ್ಕಟ್ಟಿನ ಭಾರವನ್ನು ಹೊತ್ತಿವೆ ಎಂಬುದನ್ನು ಎತ್ತಿ ತೋರಿಸಲು ರಾಜಣ್ಣಪೇಟೆಯ ಹಳ್ಳಿಯಲ್ಲಿ ಸ್ಮಾರಕವನ್ನು ಸ್ಥಾಪಿಸಲಾಗಿದೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.