ನವದೆಹಲಿ: ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪದ್ಮ ಪ್ರಶಸ್ತಿ 2020ಗಳನ್ನು ಪ್ರದಾನ ಮಾಡಿದ್ದಾರೆ.
ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಜಾರ್ಜ್ ಫರ್ನಾಂಡಿಸ್ ಮತ್ತು ಸುಷ್ಮಾ ಸ್ವರಾಜ್ , ಶಾಸ್ತ್ರೀಯ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ಅರುಣ್ ಜೇಟ್ಲಿ ಅವರ ಪತ್ನಿ ಸಂಗೀತಾ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿದರು. ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಪದ್ಮಭೂಷಣ ಪಡೆದರು.
ಕರ್ನಾಟಕದವರಾದ ಹರೇಕಳ ಹಾಜಬ್ಬ, ಎಂಪಿ ಗಣೇಶ್, ವಿದೂಷಿ ಕೆ.ಎಸ್ ಜಯಲಕ್ಷ್ಮಿ, ಶ್ರೀ ಕೆವಿ ಸಂಪತ್ ಕುಮಾರ್(ಮರಣೋತ್ತರ) ಪದ್ಮಶ್ರೀ ಪಡೆದಿದ್ದಾರೆ.
ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಗಾಯಕ ಅದ್ನಾನ್ ಸಮಿ, ಐಸಿಎಂಆರ್ನ ಮಾಜಿ ಮುಖ್ಯ ವಿಜ್ಞಾನಿ ಡಾ ರಾಮನ್ ಗಂಗಾಖೇಧಕರ್, ನಟಿ ಕಂಗನಾ ರಣಾವತ್, ಪರಿಸರವಾದಿ ಹಿಮ್ಮತರಾಂ ಭಂಭು ಮತ್ತು ಹಿರಿಯ ರಂಗಭೂಮಿ ಮತ್ತು ದೂರದರ್ಶನ ಕಲಾವಿದೆ ಸರಿತಾ ಜೋಷಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಪ್ರಮುಖರು.
2020 ರಲ್ಲಿ ಗಣರಾಜ್ಯೋತ್ಸವದ ಮುನ್ನಾದಿನದಂದು ಸರ್ಕಾರವು 141 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ಈ ಪಟ್ಟಿಯು ಏಳು ಪದ್ಮವಿಭೂಷಣ, 16 ಪದ್ಮಭೂಷಣ ಮತ್ತು 118 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ.
Hon'ble President Ram Nath Kovind will confer the Padma Awards to the 2020 & 2021 winners at a ceremonial function at the Rashtrapati Bhavan. The ceremony will be held in 4 sessions, today and tomorrow. Watch live here: https://t.co/KmXSefSIbF #PeoplesPadma @rashtrapatibhvn pic.twitter.com/gFaHDrVpIq
— MyGovIndia (@mygovindia) November 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.