ನವದೆಹಲಿ: ಅಕ್ಟೋಬರ್ 1 ರಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಿದ ‘ಇಂಡಿಯಾ ಪೆವಿಲಿಯನ್ ದುಬೈ ಎಕ್ಸ್ಪೋ 2020’ ತನ್ನ ಮೊದಲ ತಿಂಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಇಂಡಿಯಾ ಪೆವಿಲಿಯನ್ಗೆ ನವೆಂಬರ್ 3 ರವರೆಗೆ 2,00,000 ಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡಿದ್ದಾರೆ. ವಿವಿಧ ವಲಯ ಮತ್ತು ರಾಜ್ಯ ನಿರ್ದಿಷ್ಟ ಸೆಷನ್ಗಳ ಮೂಲಕ ಭಾರತದ ಅಭಿವೃದ್ಧಿ ಮಾರ್ಗಸೂಚಿಯನ್ನು ಇಲ್ಲಿ ಚರ್ಚಿಸಲಾಗುತ್ತಿದೆ. ಇದು ದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಜನರನ್ನು ಆಕರ್ಷಿಸಲು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಇಂಡಿಯಾ ಪೆವಿಲಿಯನ್ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ದುಬೈನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಾ. ಅಮನ್ ಪುರಿ, “ಅಕ್ಟೋಬರ್ ತಿಂಗಳಲ್ಲಿ ಇಂಡಿಯಾ ಪೆವಿಲಿಯನ್ ಭಾರಿ ಯಶಸ್ಸನ್ನು ಕಂಡಿತು. ಈಗಾಗಲೇ ಸಾಕಷ್ಟು ಮಂದಿ ಆಗಮಿಸಿದ್ದಾರೆ, ಮುಂಬರುವ ತಿಂಗಳುಗಳಲ್ಲಿ ಈ ಆವೇಗ ಮುಂದುವರಿಯುತ್ತದೆ ಎಂದು ನಿರೀಕ್ಷಿಸುತ್ತೇವೆ” ಎಂದಿದ್ದಾರೆ.
“ಇಂಡಿಯಾ ಪೆವಿಲಿಯನ್ ಸಹಯೋಗ ಮತ್ತು ಹೂಡಿಕೆಗೆ ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಪ್ರದರ್ಶಿಸುತ್ತದೆ, ಭಾರತದ ಹಬ್ಬಗಳ ಜನಪ್ರಿಯತೆ, ಆಹಾರ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಮುಖ ಅಂಶಗಳಾಗಿವೆ” ಎಂದು ಅವರು ಹೇಳಿದರು.
ಅಕ್ಟೋಬರ್ 3-9 ರಿಂದ ‘ಹವಾಮಾನ ಮತ್ತು ಜೀವವೈವಿಧ್ಯ ಸಪ್ತಾಹ’ದೊಂದಿಗೆ ಪೆವಿಲಿಯನ್ ಪ್ರಾರಂಭವಾಯಿತು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳು ಮತ್ತು ಪ್ರಪಂಚದ ಹವಾಮಾನ ಕ್ರಿಯಾ ಯೋಜನೆಯನ್ನು ಎತ್ತಿ ತೋರಿಸುವ ವಿವಿಧ ಸೆಷನ್ ಅನ್ನು ಇಲ್ಲಿ ಆಯೋಜಿಸಿದೆ. ಇದರ ನಂತರ ಬಾಹ್ಯಾಕಾಶ ಮತ್ತು ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಪ್ತಾಹವನ್ನು ನಡೆಸಲಾಯಿತು, ಅಲ್ಲಿ ಪ್ರದೇಶಗಳ ಭವಿಷ್ಯ, ಪ್ರದೇಶಗಳಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳು, ಸರ್ಕಾರದ ನಿಯಮಗಳ ಪಾತ್ರ ಮತ್ತು ಪ್ರೋತ್ಸಾಹಗಳನ್ನು ಚರ್ಚಿಸಲಾಯಿತು.
ಸೆಕ್ಟರ್ ನಿರ್ದಿಷ್ಟ ವಾರಗಳನ್ನು ಹೊರತುಪಡಿಸಿ, ಇಂಡಿಯಾ ಪೆವಿಲಿಯನ್ ಗುಜರಾತ್, ಕರ್ನಾಟಕ ಮತ್ತು ಲಡಾಖ್ಗೆ ನಿರ್ದಿಷ್ಟ ವಾರಗಳನ್ನು ಆಯೋಜಿಸಿದೆ. ಇಂಡಿಯಾ ಪೆವಿಲಿಯನ್ನಲ್ಲಿ ಅಕ್ಟೋಬರ್ ತಿಂಗಳ ದಸರಾ ಮತ್ತು ನವರಾತ್ರಿ ಆಚರಣೆಯ ಸಮಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆದಿದೆ. ಇವುಗಳಲ್ಲಿ ಅಸಂಖ್ಯಾತ ಸಂದರ್ಶಕರು ಮತ್ತು ಗಣ್ಯರಿಗೆ ಜಾನಪದ ನೃತ್ಯಗಳು, ಕಥೆ ಹೇಳುವಿಕೆ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದಿವೆ.
India Pavilion emerges as a Shining Star!🌟
With over 2,00,000+ footfalls, #IndiaAtDubaiExpo is one of the most popular pavilions at the Expo.
Listen to what our visitors say about the grand 🇮🇳 pavilion. Visit to experience the masterpiece yourself! pic.twitter.com/KQvHKI7gi9
— Piyush Goyal (@PiyushGoyal) November 5, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.