ನವದೆಹಲಿ: 100 ಟನ್ ನ್ಯಾನೋ ನೈಟ್ರೋಜನ್ ದ್ರವ ರಸಗೊಬ್ಬರಗಳನ್ನು ಹೊತ್ತ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಗುರುವಾರ ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಬಂದಿಳಿದಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್, ನ್ಯಾನೊ ರಸಗೊಬ್ಬರಗಳನ್ನು ಏರ್ಲಿಫ್ಟಿಂಗ್ ಮಾಡುವ ಮೂಲಕ ತುರ್ತು ಬೆಂಬಲ ನೀಡುವಂತೆ ಶ್ರೀಲಂಕಾ ಸರ್ಕಾರವು ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಈ ವಿತರಣೆ ನಡೆದಿದೆ ಎಂದು ಹೇಳಿದೆ.
“ಬೆಳಕಿನ ಹಬ್ಬ ದೀಪಾವಳಿಯಂದು ಭಾರತೀಯ ವಾಯುಪಡೆಯು ಮತ್ತೊಮ್ಮೆ ಶ್ರೀಲಂಕಾಕ್ಕೆ ಭರವಸೆಯ ಕಿರಣವನ್ನು ನೀಡಿದೆ. ಭಾರತದಿಂದ ನ್ಯಾನೋ ಗೊಬ್ಬರಗಳನ್ನು ಏರ್ಲಿಫ್ಟಿಂಗ್ ಮಾಡುವ ಮೂಲಕ ತುರ್ತು ಬೆಂಬಲ ನೀಡುವಂತೆ ಮಾಡಿದ ಕರೆಗೆ ಸ್ಪಂದಿಸಿ ಭಾರತೀಯ ವಾಯುಸೇನಾ ವಿಮಾನಗಳು 100 ಟನ್ ರಸಗೊಬ್ಬರಗಳನ್ನು ಹೊತ್ತು ಕೊಲಂಬೊಕ್ಕೆ ಬಂದಿವೆ” ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.
ಚೀನಾದಿಂದ ರಾಸಾಯನಿಕ ಗೊಬ್ಬರ ಆಮದು ನಿಲ್ಲಿಸಲು ಮೇ ತಿಂಗಳಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ತೆಗೆದುಕೊಂಡ ನಿರ್ಧಾರದ ನಂತರ ನ್ಯಾನೊ ನೈಟ್ರೋಜನ್ ದ್ರವ ಗೊಬ್ಬರವನ್ನು ಭಾರತ ಶ್ರೀಲಂಕಾಗೆ ಪೂರೈಸಿದೆ.
ಚೀನಾದಿಂದ ಆಮದು ನಿಷೇಧದ ನಂತರ ಶ್ರೀಲಂಕಾ ರಸಗೊಬ್ಬರಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಶ್ರೀಲಂಕಾಕ್ಕೆ ನ್ಯಾನೊ ರಸಗೊಬ್ಬರ ಪೂರೈಕೆಯನ್ನು ವೇಗಗೊಳಿಸಲು ಭಾರತ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.