ನವದೆಹಲಿ: ಅಫ್ಘಾನಿಸ್ಥಾನದ ಕುರಿತು ದೆಹಲಿ ಪ್ರಾದೇಶಿಕ ಭದ್ರತಾ ಸಂವಾದವನ್ನು ನವೆಂಬರ್ 10 ರಂದು ಭಾರತ ಆಯೋಜಿಸಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯು ಎನ್ಎಸ್ಎ ಅಜಿತ್ ದೋವಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮೂಲಗಳ ಪ್ರಕಾರ ಭಾರತ ನೀಡಿರುವ ಆಹ್ವಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯ ಏಷ್ಯಾದ ದೇಶಗಳು ಹಾಗೂ ರಷ್ಯಾ ಮತ್ತು ಇರಾನ್ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ.
ಅಫ್ಘಾನಿಸ್ಥಾನದ ಹತ್ತಿರದ ನೆರೆಹೊರೆಯವರು ಮಾತ್ರವಲ್ಲದೆ ಎಲ್ಲಾ ಮಧ್ಯ ಏಷ್ಯಾದ ದೇಶಗಳು ಇದರಲ್ಲಿ ಭಾಗವಹಿಸುತ್ತಿರುವುದು ವಿಶೇಷ.
ಅಫ್ಘಾನಿಸ್ಥಾನದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಭಾರತದ ನೀಡುತ್ತಿರುವ ಪ್ರಾಮುಖ್ಯತೆಯನ್ನು ಜಗತ್ತು ಗುರುತಿಸುತ್ತಿದೆ ಎಂಬುದಕ್ಕೆ ಈ ಅಭೂತಪೂರ್ವ ಸ್ಪಂದನೆಗಳು ಸಾಕ್ಷಿಯಾಗುತ್ತಿದೆ. ಚೀನಾ ಮತ್ತು ಪಾಕಿಸ್ಥಾನಕ್ಕೂ ಆಹ್ವಾನಗಳನ್ನು ನೀಡಲಾಗಿದ್ದು, ಔಪಚಾರಿಕ ಪ್ರತಿಕ್ರಿಯೆಗಳಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಪಾಕಿಸ್ಥಾನ ಹಾಜರಾಗುವುದಿಲ್ಲ ಎಂದು ಮಾಧ್ಯಮಗಳ ಮೂಲಕ ಸೂಚಿಸಿದೆ.
ಪಾಕಿಸ್ಥಾನದ ನಿರ್ಧಾರ ದುರದೃಷ್ಟಕರವಾಗಿದೆ, ಆದರೆ ಆಶ್ಚರ್ಯವೇನಲ್ಲ ಮತ್ತು ಇದು ಅಫ್ಘಾನಿಸ್ಥಾನವನ್ನು ತನ್ನ ಸಂರಕ್ಷಿತ ರಾಷ್ಟ್ರವಾಗಿ ನೋಡುವ ಪಾಕಿಸ್ಥಾನದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತೀಯ ಮೂಲಗಳು ತಿಳಿಸಿವೆ. ಈ ಮಾದರಿಯ ಹಿಂದಿನ ಸಭೆಗಳಿಗೂ ಪಾಕಿಸ್ಥಾನ ಹಾಜರಾಗಿರಲಿಲ್ಲ.
ಭಾರತವು ಆಯೋಜಿಸುತ್ತಿರುವ ಈ ಸಭೆಯಲ್ಲಿ ಉನ್ನತ ಮಟ್ಟದ ಭಾಗವಹಿಸುವಿಕೆಯು ಅಫ್ಘಾನಿಸ್ಥಾನದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರಾದೇಶಿಕ ರಾಷ್ಟ್ರಗಳ ವ್ಯಾಪಕ ಮತ್ತು ಹೆಚ್ಚುತ್ತಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಪರಸ್ಪರ ಸಮಾಲೋಚಿಸಲು ಮತ್ತು ಸಮನ್ವಯಗೊಳಿಸು ಬಯಕೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.